Webdunia - Bharat's app for daily news and videos

Install App

ನಡು ರಸ್ತೆಯಲ್ಲೇ ಬಡಿದಾಟ..ಏಳು ಜನರಿಗೆ ಗಾಯ..!

Webdunia
ಗುರುವಾರ, 22 ಜೂನ್ 2023 (15:32 IST)
ಗುಂಪುಗಳ ನಡುವೆ ನಡು ರಸ್ತೆಯಲ್ಲಿ ನಡೆದ ಕಾಳಗ ಸುತ್ತಾ ಮುತ್ತಲ ಜನರನ್ನ ನಿಜಕ್ಕೂ ಬೆಚ್ಚಿ ಬೀಳಿಸಿತ್ತು.ಕ್ಷುಲ್ಲಕ ಕಾರಣಕ್ಕಾಗಿ..ಅದು ಕೂಡ ಟಾಟಾ ಏಸ್ ವಾಹನ ಅಡ್ಡ ಬಂದಿದ್ದಕ್ಕೆ, ಆಗಿದ್ದೇನಂದ್ರೆ ಜೂನ್ 18 ರ ರಾತ್ರಿ 9.45 ರ ಸಮಯ.ದೂರುದಾರ ಪ್ರದೀಪ್ ಸೇರಿ ಮೂವರು ಟಾಟಾ ಏಸ್ ವಾಹನದಲ್ಲಿ ತೆರಳ್ತಿದ್ರು..ಪದ್ಮನಾಭನಗರ ರಾಘವೇಂದ್ರ ಬಡಾವಣೆ ಯಲ್ಲಿರುವ ತ್ರಿವೇಣಿ ಕ್ರಿಯೇಟಿವ್ ಅಂಗಡಿ ಮುಂದೆ ಬರ್ತಿದ್ದಂತೆ ಹಿಂದೆಯಿಂದ ಬೈಕ್ ನಲ್ಲಿ ಬಂದ ಕ್ಯಾನ್ ಸಂದೀಪ್ ಮತ್ತು ರಾಜೀವ್ ಟಾಟಾ ಏಸ್ ವಾಹನ ಅಡ್ಡಗಟ್ಟಿದ್ದರು.ಏನೋ ಸೈಡ್ ಬಿಡಕ್ ಆಗಲ್ವಾ ಅಂತಾ ಗಲಾಟೆ ಶುರು ಮಾಡಿದ್ದರು. ಇದರಿಂದ ಕೋಪಗೊಂಡ ಟಾಟಾ ಏಸ್ ವಾಹನದಲ್ಲಿದ್ದ ಪ್ರದೀಪ್ ಗೆಳೆಯ ಸಂದೀಪ್ ಗೆ ಹೊಡೆದಿದ್ದ.ಇದೇ ಘಟನೆ ಕ್ಯಾನ್ ಸಂದೀಪ್ ಮತ್ತು ರಾಜೀವ್ ರೊಚ್ಚಿಗೇಳುವಂತೆ ಮಾಡಿತ್ತು.
ಇಷ್ಟಕ್ಕೆ ಸುಮ್ಮನಾಗದ ಸಂದೀಪ್ ಮತ್ತು ರಾಜೀವ್ ಫೋನ್ ಮಾಡಿ ಹುಡುಗರನ್ನ ಕರೆಸಿದ್ರು.ಸ್ಥಳಕ್ಕೆ ರೌಡಿ ಶೀಟರ್ ಸಂದೀಪ್ ಸೇರಿದಂತೆ ಗೆಳೆಯರು ಬಂದಿದ್ರು.ಪ್ರದೀಪ್ ಶೆಟ್ಟಿ ಕೂಡ ಫೋನ್ ಮಾಡಿ ರೂಮ್ ನಲ್ಲಿದ್ದ ಗೆಳೆಯರನ್ನ ಕರೆಸಿಕೊಂಡಿದ್ದ.ಈ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದೆ.ಗಲಾಟೆಯಲ್ಲಿ ಪ್ರದೀಪ್ ಶೆಟ್ಟಿ ಗುಂಪಿನ ಏಳು ಜನರಿಗೆ ಗಾಯವಾಗಿದೆ.ಓರ್ವನ ಹಲ್ಲು ಉದುರಿದ್ರೆ ಮತ್ತೋರ್ವನ ತಲೆಗೆ ಗಾಯವಾಗಿದೆ..ಘಟನೆ ಸಂಬಂಧ ಪ್ರದೀಪ್ ಶೆಟ್ಟಿ ದೂರಿನ ಅನ್ವಯ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ರೌಡಿ ಶೀಟರ್ ಸಂದೀಪ್,ಶಶಾಂಕ್,ಕಿರಣ್,ಶ್ರೀಧರ್ ಸೇರಿ ನಾಲ್ಕು ಜನರನ್ನ ಬಂಧಿಸಿದ್ದು ಪ್ರಮುಖ ಆರೋಪಿ ಕ್ಯಾನ್ ಸಂದೀಪ್ ಸೇರಿ ಏಳು ಜನರ ಪತ್ತೆಗೆ ಬಲೆ ಬೀಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಮುಂದಿನ ಸುದ್ದಿ
Show comments