Select Your Language

Notifications

webdunia
webdunia
webdunia
webdunia

ಬಾಲ್ಯವಿವಾಹ ತಡೆಯಲು ಹೋದ ಅಧಿಕಾರಿಗಳನ್ನೇ ಓಡಿಸಿದರು!

ಬಾಲ್ಯವಿವಾಹ ತಡೆಯಲು ಹೋದ ಅಧಿಕಾರಿಗಳನ್ನೇ  ಓಡಿಸಿದರು!
ಚಿಕ್ಕೋಡಿ: , ಶನಿವಾರ, 30 ಜನವರಿ 2016 (16:24 IST)
ಚಿಕ್ಕೋಡಿಯ ವಿವಾಹ ಸಮಾರಂಭದಲ್ಲಿ ಅಪ್ರಾಪ್ತ ವಯಸ್ಕ ಜೋಡಿಗಳಿಗೆ ಬಾಲ್ಯವಿವಾಹ ತಡೆಯಲು ಹೋದ ಅಧಿಕಾರಿಗಳನ್ನು ಹೊರದಬ್ಬಿಸಿದ ಪ್ರಸಂಗ ವರದಿಯಾಗಿದೆ. 
ಚಿಕ್ಕೋಡಿಯಲ್ಲಿ ಸಾಯಿಮಂದಿರದ 9ನೇ ವಾರ್ಷಿಕೋತ್ಸವದ ಪ್ರಯುಕ್ತ 25 ಜೋಡಿಗಳಿಗೆ ಸಾಮೂಹಿಕ ವಿವಾಹ ಸಮಾರಂಭವನ್ನು ಏರ್ಪಡಿಸಲಾಗಿತ್ತು.

 ಅವರ ಪೈಕಿ ಮೂವರು ಅಪ್ರಾಪ್ತ ಜೋಡಿಗಳಿಗೆ ಬಾಲ್ಯವಿವಾಹವನ್ನು ಆಯೋಜಿಸಿದ ಮಾಹಿತಿಯು ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರಿಗೆ ಸಿಕ್ಕಿತ್ತು. ಈ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಕಾರ್ಯಕರ್ತರು ಆಗಮಿಸಿ ಬಾಲ್ಯವಿವಾಹವನ್ನು ತಡೆಯುವುದಕ್ಕೆ ಪ್ರಯತ್ನಿಸಿದಾಗ ಅವರನ್ನು ಹೊರಹಾಕಿಸಿದ ಘಟನೆ ನಡೆಯಿತು.

ವಿಧಾನಪರಿಷತ್ ಸದಸ್ಯ ಮಹಾಂತೇಷ್ ಕವಟಗಿಮಠ ಅವರ ಸೋದರ ಜಗದೀಶ್ ಕವಟಗಿ ಮಠ ಅದಿಕಾರಿಗಳ ಮೇಲೆ ದರ್ಪ ತೋರಿ ಅವರನ್ನು ಹೊರಹಾಕಿಸಿದರೆಂದು ತಿಳಿದುಬಂದಿದೆ. ಅಧಿಕಾರಿಗಳನ್ನು ಕೂಡಲೇ ಹೊರಹೋಗುವಂತೆ ತಿಳಿಸಿ ಹಲ್ಲೆ ಮಾಡಲು ಯತ್ನಿಸಿದರೆಂದು ತಿಳಿದುಬಂದಿದೆ. 

Share this Story:

Follow Webdunia kannada