Select Your Language

Notifications

webdunia
webdunia
webdunia
webdunia

ಕಳಂಕಿತರಿಗೆ ಮತ್ತೆ ಸಿಎಂ ಸಿದ್ದರಾಮಯ್ಯ ಶಿಫಾರಸ್ಸು

ಕಳಂಕಿತರಿಗೆ ಮತ್ತೆ ಸಿಎಂ ಸಿದ್ದರಾಮಯ್ಯ ಶಿಫಾರಸ್ಸು
ಬೆಂಗಳೂರು , ಸೋಮವಾರ, 23 ಜೂನ್ 2014 (13:50 IST)
ಬಿಬಿಎಂಪಿ ಕಳಂಕಿತ ಅಧಿಕಾರಿಯನ್ನು ವರ್ಗಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿ ಮತ್ತೆ ಕಳಂಕಿತರಿಗೆ ಪರೋಕ್ಷ ಬೆಂಬಲ ಸೂಚಿಸಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ.
 
ಬಿಬಿಎಂಪಿ ಅಧಿಕಾರಿಯಾದ ನಾರಾಯಣಪ್ಪ ಭ್ರಷ್ಟಾಚಾರದ ಪ್ರಕರಣದಲ್ಲಿ ಆರೋಪಿಗಳಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.
 
ಬಿಬಿಎಂಪಿ ಪೂರ್ವ ವಲಯದ ಹಣಕಾಸು ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನಾರಾಯಣಪ್ಪ ಅವರನ್ನು ಚೆಕ್ ವಿಭಾಗದ ಅಧೀಕ್ಷಕರಾಗಿ ಬಡ್ತಿ ನೀಡಿ ಆದೇಶ ಹೊರಡಿಸಿರುವುದು ವಿಪಕ್ಷಗಳಿಗೆ ಸರಕಾರದ ವಿರುದ್ಧ ಅಸ್ತ್ರ ದೊರತಂತಾಗಿದೆ    

Share this Story:

Follow Webdunia kannada