Select Your Language

Notifications

webdunia
webdunia
webdunia
webdunia

ಡಾ. ಎಂ.ಎಂ. ಕಲಬುರ್ಗಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಡಾ. ಎಂ.ಎಂ. ಕಲಬುರ್ಗಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ
ಬೆಂಗಳೂರು , ಭಾನುವಾರ, 30 ಆಗಸ್ಟ್ 2015 (16:18 IST)
ಹಿರಿಯ ಸಾಹಿತಿ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿ ಇಂದು ಸಂಜೆ ಧಾರವಾಡಕ್ಕೆ ತೆರಳುತ್ತಿದ್ದು ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. 
 
ತಮಗೆ ಅನ್ನಿಸಿದ್ದನ್ನು ನೇರ ನಿರ್ಭಿಡೆಯಿಂದ ಪ್ರತಿಪಾದಿಸುತ್ತಿದ್ದರು. ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಕಲಬುರ್ಗಿಯವರ ಹತ್ಯೆಯಲ್ಲಿ ಭಾಗಿಯಾದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
 
ಹಲವಾರು ಬಾರಿ ನಾನು ಅವರನ್ನು ಭೇಟಿಯಾಗಿದ್ದೇನೆ. ಅವರೊಬ್ಬ ಮಹಾನ್ ಮುತ್ಸದ್ಧಿ, ಪ್ರತಿಭಾವಂತ ಸಂಶೋದಕ. ಅವರಿಲ್ಲದ ಸಾಹಿತ್ಯ ಲೋಕ ತುಂಬಾ ಬಡವಾಗಿದೆ ಎಂದು ತಿಳಿಸಿದ್ದಾರೆ.
 
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

Share this Story:

Follow Webdunia kannada