Webdunia - Bharat's app for daily news and videos

Install App

ಉಗ್ರಪ್ಪರಿಗೆ ಸಿಎಂ ಸಿದ್ದರಾಮಯ್ಯ ಪವರ್ ಆಫ್ ಅಟಾರ್ನಿ ನೀಡಲಿ: ಶೆಟ್ಟರ್ ಕಿಡಿ

Webdunia
ಶುಕ್ರವಾರ, 20 ಮೇ 2016 (15:44 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾರೇ ಮಾತನಾಡಿದರು ಉಗ್ರಪ್ಪ ಮಧ್ಯ ಪ್ರವೇಶಿಸುತ್ತಾರೆ. ಉಗ್ರಪ್ಪನವರಿಗೆ ಮುಖ್ಯಮಂತ್ರಿಯವರು ಪವರ್ ಆಫ್ ಅಟಾರ್ನಿ ನೀಡಿರಬೇಕು. ಬೇಕಿದ್ದರೆ ಮುಖ್ಯಮಂತ್ರಿಯವರು ಉಗ್ರಪ್ಪರನ್ನು ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳಲಿ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

ನ್ಯಾಯಮೂರ್ತಿ ಎಸ್‌.ಆರ್.ನಾಯಕ್ ನೇಮಕವಾದ ಬಳಿಕ ರಾಜ್ಯ ಸರಕಾರ ಎಸಿಬಿಯನ್ನು ರದ್ದುಮಾಡಲು ಸಂಚು ರೂಪಿಸಿದೆ. ರಾಜ್ಯದ ಕೆಲವು ವಿಧೇಯಕಗಳು ವಾಪಸ್ ಬರುತ್ತಿದೆ. ರಾಜ್ಯ ಸರಕಾರ ಮತ್ತು ರಾಜ್ಯಪಾಲರ ನಡುವಣ ಸಂವಹನದ ಕೊರತೆಯಿಂದ ಅನೇಕ ವಿಧೇಯಕಗಳು ವಾಪಸ್ ಬರುತ್ತಿವೆ ಎಂದು ಆರೋಪಿಸಿದರು. 
 
ರಾಜಭವನದಿಂದ ವಿಧೇಯಕಗಳು, ಸುಗ್ರಿವಾಜ್ಞೆಗಳು ವಾಪಸ್ ಆಗುತ್ತಿರುವ ಕುರಿತಂತೆ ರಾಜ್ಯದ ಸಚಿವರುಗಳು, ರಾಜ್ಯಪಾಲರಿಗೆ ಸ್ಪಷ್ಟ ವಿವರಣೆ ನೀಡಲಿ. ಇತ್ತೀಚಿಗೆ ಸಚಿವರು ರಾಜಭವನಕ್ಕೆ ಹೋಗುವುದೇ ಅಪರೂಪವಾಗಿದೆ. ಆದರೆ, ಕಾಂಗ್ರೆಸ್ ಮುಖಂಡ ಉಗ್ರಪ್ಪ ರಾಜ್ಯಪಾಲರ ವಿರುದ್ಧ ಅನಗತ್ಯ ವಾಗ್ದಾಳಿ ನಡೆಸುತ್ತಿದ್ದಾರೆ. ಇಂತವರಿಂದಲೇ ಸರಕಾರ ಹಾಳಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
 
ನೂತನ ಲೋಕಾಯುಕ್ತರ ಆಯ್ಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ನ್ಯಾಯಮೂರ್ತಿ ಎಸ್‌.ಆರ್.ನಾಯಕ್ ಹೆಸರನ್ನೇ ಶಿಫಾರಸ್ಸು ಮಾಡುತ್ತಿರುವುದರ ಹಿಂದೆ ದುರುದ್ದೇಶವಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.


ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡೈರಿ ರಾಜಕಾರಣಕ್ಕೆ ಕಾಲಿಟ್ಟ ಡಿಕೆ ಸುರೇಶ್‌: ನಾಮಪತ್ರ ಸಲ್ಲಿಕೆ

Jammu Kashmir: 11 ಸ್ಥಳಗಳ ಮೇಲೆ SIA ದಾಳಿ

ಆರತಕ್ಷತೆ ವೇಳೆ ಮಧುಮಗ ಕುಸಿದುಬಿದ್ದು ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ISRO: 101ನೇ ಉಪಗ್ರಹ ಉಡಾವಣೆಗೆ ಸಜ್ಜಾದ ಇಸ್ರೋ, ಇದರ ವಿಶೇಷ ಹೀಗಿದೆ

Bengaluru International Airport: ಆರಂಭದ ಬಳಿಕ ಮೊದಲ ಬಾರಿ ದಾಖಲೆಯ ಲಾಭ

ಮುಂದಿನ ಸುದ್ದಿ
Show comments