ಗುಂಡ್ಯ ರಕ್ಷಿತಾರಣ್ಯದಲ್ಲಿ ಚಾರಣಕ್ಕೆ ತೆರಳಿದ 15 ಮಂದಿ ಚಾರಣಿಗರು ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ. ಸಕಲೇಶಪುರ ತಾಲೂಕಿನ ಅರಮನೆ ಗುಡ್ಡದ ಬಳಿ ಚಾರಣಕ್ಕೆ ತೆರಳಿದ್ದ 15 ಮಂದಿಯ ಸಂಪರ್ಕ ಕಡಿತಗೊಂಡಿದ್ದು, ಕಣ್ಮರೆಯಾದವರೆಲ್ಲ ಚೆನ್ನೈ ಮೂಲದ ಚಾರಣಿಗರು ಎಂದು ಹೇಳಲಾಗಿದೆ.
ಈ ಪ್ರದೇಶದ ಬಗ್ಗೆ ಚಾರಣಿಗರಿಗೆ ಕಡಿಮೆ ಪರಿಚಯವಿರುವುದರಿಂದ ಸಾಕಷ್ಟು ಆತಂಕ ಎದುರಾಗಿದೆ. ನಿನ್ನೆ ಓರ್ವ ಕಣ್ಮರೆಯಾಗಿದ್ದಾನೆಂದು 14 ಮಂದಿ ಮಾಹಿತಿ ನೀಡಿದ್ದರು.ಇಂದು 15 ಜನರೊಂದಿಗೆ ಸಂಪರ್ಕ ಕಡಿತಗೊಂಡಿದೆ. ಎಸಿ ಮಧುಕೇಶವ್ ನೇತೃತ್ವದಲ್ಲಿ ಈ ಚಾರಣಿಗರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸಾವಿರಾರು ಎಕರೆ ಪ್ರದೇಶದ ದಟ್ಟಾರಣ್ಯ ಮತ್ತು ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಶೋಧಕಾರ್ಯ ಕಷ್ಟವಾಗಿದೆ.