Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಮುಂದುವರೆದ ಸರಗಳ್ಳತನ

ಬೆಂಗಳೂರಿನಲ್ಲಿ ಮುಂದುವರೆದ ಸರಗಳ್ಳತನ
ಬೆಂಗಳೂರು , ಭಾನುವಾರ, 23 ಆಗಸ್ಟ್ 2015 (11:32 IST)
ಬೆಂಗಳೂರಿನಲ್ಲಿ ಸರಗಳ್ಳತನದ ಪ್ರಕರಣಗಳು ಮುಂದುವರೆದಿದ್ದು ಬಸವೇಶ್ವರನಗರದಲ್ಲಿ ಸುಶೀಲಮ್ಮ ಎಂಬುವವರ 50 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ಸಂಬಂಧಿಕರಿಗೆ ಬಸ್ ಹತ್ತಿಸಿ ಮನೆಗೆ ಹಿಂತಿರುಗುತ್ತಿದ್ದ ಸುಶೀಲಮ್ಮ ಅವರ ಬಳಿ ಬಂದು ನಿಂತ ಪಲ್ಸರ್ ಬೈಕ್‌ನಲ್ಲಿದ್ದ ಇಬ್ಬರು ಕಳ್ಳರು ಅವರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. 
 
ಬೆಂಗಳೂರಿನಲ್ಲಿ ಸರಗಳ್ಳತನ ಅವ್ಯಾಹತವಾಗಿ ನಡೆಯುತ್ತಿದ್ದು, ಕಳೆದ ವಾರ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದರು. ಅವರಿಂದ 20ರಿಂದ 25 ಸರಗಳನ್ನು ವಶಪಡಿಸಿಕೊಳ್ಳಲಾಗಿತ್ತು. 
 
ಆದರೆ ಇಂದು ಮತ್ತೆ ಬಸವೇಶ್ವರ ನಗರದಲ್ಲಿ ದುಷ್ಕೃತ್ಯ ಮರುಕಳಿಸಿದ್ದು ಸಾರ್ವಜನಿಕರ ಮತ್ತು ಪೊಲೀಸರ ತಲೆನೋವನ್ನು ಮತ್ತಷ್ಟು ಹೆಚ್ಚಿಸಿದೆ. 
 
ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada