Webdunia - Bharat's app for daily news and videos

Install App

ಡಿಐಜಿ ರೂಪಾ ಬೆನ್ನಲ್ಲೇ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಎತ್ತಂಗಡಿ

Webdunia
ಸೋಮವಾರ, 17 ಜುಲೈ 2017 (16:28 IST)
ಕೇಂದ್ರ ಕಾರಾಗೃಹದ ಡಿಐಜಿ ಡಿ. ರೂಪಾ ಎತ್ತಂಗಡಿ ಬೆನ್ನಲ್ಲೇ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಅವರನ್ನೂ ಎತ್ತಂಗಡಿ ಮಾಡಿ ಸರ್ಕಾರ ಆದೇಶಿಸಿದೆ. ಕೃಷ್ಣಕುಮಾರ್ ಅವರಿಗೆ ಜಾಗ ಯಾವುದೇ ಜಾಗ ಸೂಚಿಸದೇ ವರ್ಗಾವಣೆ ಆದೇಶ ಹೊರಬಿದ್ದಿದ್ದು, ಅಧೀಕ್ಷಕಿ ಡಾ.ಅನಿತಾ ರೈ ಅವರನ್ನ ಪ್ರಭಾರಿ ಹುದ್ದೆಗೆ ನಿಯೋಜಿಸಲಾಗಿದೆ.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಣ್ಣಾಡಿಎಂಕೆ ನಾಯಕಿ ಶಶಿಕಲಾ, ತೆಲಗಿಗೆ ವಿಶೇಷ ಸವಲತ್ತು ಮತ್ತು ಗಾಂಜಾ ಸರಬರಾಜು ಸೇರಿದಂತೆ ಹಲವು ಅಕ್ರಮಗಳ ಬಗ್ಗೆ ಡಿಐಜಿ ರೂಪಾ, ಕಾರಾಗೃಹದ ಡಿಜಿಗೆ ವರದಿ ನೀಡಿದ್ದರು. ಈ ವರದಿ ರಾಜ್ಯಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಬಹಿರಂಗ ಹೇಳಿಕೆ ನೀಡದಂತೆ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದ ಸರ್ಕಾರ, ಡಿಐಜಿ ಡಿ. ರೂಪಾ ಮತ್ತು ಡಿಜಿ ಸತ್ಯನಾರಾಯಣ್ ರಾವ್ ಅವರನ್ನ ವರ್ಗಾವಣೆ ಮಾಡಿ ಬೆಳಗ್ಗೆ ಆದೇಶ ಮಾಡಿತ್ತು.

ಆ ಬಳಿಕ ಪ್ರತಿಪಕ್ಷಗಳು ಸೇರಿದಂತೆ, ಮಾಧ್ಯಮಗಳಿಂದ ತೀವ್ರ ಟೀಕೆ ಕೇಳಿಬಂದಿತ್ತು. ಅಕ್ರಮ ಬಯಲು ಮಾಡಿದ್ದ ಡಿಐಜಿ ರೂಪಾ ಅವರನ್ನ ವರ್ಗಾವಣೆ ಮಾಡಿದ್ದ ಬಗ್ಗೆ ಭಾರೀ ಟೀಕೆ ಕೇಳಿಬಂದಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments