Webdunia - Bharat's app for daily news and videos

Install App

ಮರಗೋಡಿನಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಕೌನ್ಸೆಲಿಂಗ್ ಕಾರ್ಯಕ್ರಮ

Webdunia
ಭಾನುವಾರ, 13 ಮಾರ್ಚ್ 2022 (20:29 IST)
ತನ್ನ ಸ್ವಂತ ಪರಿಶ್ರಮದಿಂದ ಅರ್ಹತೆಗೆ ತಕ್ಕಂತೆ ಉದ್ಯೋಗ ಪಡೆಯಲು ಮುಂದಾಗಬೇಕಿದೆ ಎಂದು ಕಡಗದಾಳು ಸರ್ಕಾರಿ ಪ್ರೌಢಶಾಲೆ ಯ ಶಿಕ್ಷಕಿ ಎಸ್.ಡಿ.ಅನಿತಾ ಅಭಿಪ್ರಾಯಪಟ್ಟರು.
        ಭಾರತ ಸರ್ಕಾರದ ನೆಹರು ಯುವ ಕೇಂದ್ರ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ , ಭಾರತೀ ಸಂಯುಕ್ತ ಪದವಿಪೂರ್ವ ಕಾಲೇಜು ಮರಗೋಡು ಹಾಗೂ ಹುಲಿತಾಳದ ಭಗತ್ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಮರಗೋಡಿನ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ವೃತ್ತಿ ಮಾರ್ಗದರ್ಶನ ಮತ್ತು ಕೌನ್ಸೆಲಿಂಗ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
        ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಿಷಯದಲ್ಲಿ ಮುಂದಿನ ಅಧ್ಯಯನ ಮುಂದುವರಿಸಿದಲ್ಲಿ ದೊರೆಯಬಹುದಾದ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.
        ಲಭ್ಯವಿರುವ ಹತ್ತು ಹಲವು ಕಲಿಕಾ ಕೋರ್ಸ್ಗಳು ಮತ್ತು ಅದರಿಂದ ಲಭ್ಯವಾಗುವ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಟ್ಟರು. ಇಂದಿನ ಯುವಜನಾಂಗಕ್ಕೆ ಸ್ಕಿಲ್ ಇಂಡಿಯಾದಂತಹ ಯೋಜನೆಗಳ ಬಗ್ಗೆ ಪೂರ್ಣ ಅರಿವು ಇರಬೇಕು. ಅಂತಹ ಯೋಜನೆಗಳಲ್ಲಿನ ವೈವಿಧ್ಯಮಯ ಉದ್ಯೋಗಾಧಾರಿತವಾದ ತರಬೇತಿಗಳು ಹಾಗೂ ಬ್ಯಾಂಕಿನಿಂದ ಇರುವ ಸಾಲ ಸೌಲಭ್ಯಗಳು ಬದುಕು ಕಟ್ಟಿಕೊಡಲು ನೆರವಾಗುತ್ತವೆ ಎಂದರು.  
        ಗಳಿಕೆಯ ಕಾಲದಲ್ಲಿ ಕಲಿಕೆಯನ್ನು ದೂರಶಿಕ್ಷಣದ ಮೂಲಕ  ಸಾಧಿಸಬಹುದಾಗಿದೆ. ಕೊಡಗಿನಲ್ಲಿ ಸ್ವ ಉದ್ಯೋಗದಲ್ಲಿ ಯಶಸ್ಸು ಕಂಡವರ ಉದಾಹರಣೆಯನ್ನು ನೀಡಿ, ಯಾವ ಉದ್ಯೋಗವೂ ಕೀಳಲ್ಲ ಎಂಬ ಭಾವನೆ ಅತಿಮುಖ್ಯ ಎಂದು ತಿಳಿಸಿದರು. 
       ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಹುಲಿತಾಳದ ಭಗತ್ ಯುವಕ ಸಂಘದ ಅಧ್ಯಕ್ಷರಾದ ಹೆಚ್.ಎಂ.ವಿನೋದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಆರ್.ಸುರೇಶ್ ನಾಯಕ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಹಾಕತ್ತೂರು ಗ್ರಾಮ ಪಂಚಾಯತ್ ಸದಸ್ಯ ಬಿ.ವಿ.ಯೋಗೇಶ್ ಹಾಗೂ ಭಾರತಿ ಹೈಸ್ಕೂಲ್ ಸೊಸೈಟಿ ಆಡಳಿತ ಮಂಡಳಿಯ ನಿರ್ದೇಶಕರಾದ ಪಿ.ಎಂ.ಶರತ್ ಉಪಸ್ಥಿತರಿದ್ದರು. ಪಿ.ಎಸ್.ರವಿಕೃಷ್ಣ ನಿರ್ವಹಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಲ್ಲೇ ಬಟ್ಟೆ ತೆಗಿ, ಸೆಲ್ಫೀ ಹೊಡಿ.. ಹೋಟೆಲ್ ಬಾಲ್ಕನಿಯಲ್ಲಿ ಮಹಿಳೆಯ ಅಸಭ್ಯ ವರ್ತನೆ: ವೈರಲ್ ಆದ video

ನನಗೆ ಮುಸ್ಲಿಮರೇ ಫಸ್ಟ್ ಎಂದ ತುಳು ಕಾಮಿಡಿ ನಟ ಅರವಿಂದ್ ಬೋಳಾರ್: ನೀವು ಯಾವ ಸೀಮೆ ಹಿಂದೂ ಎಂದು ನೆಟ್ಟಿಗರ ತರಾಟೆ Video

ಕರ್ತವ್ಯಕ್ಕೂ ಮೀರಿದ ಸೇವೆ: ಬೆಂಗಳೂರಿನಲ್ಲಿ ಮಳೆ ನೀರಿನ ನಡುವೆ ನೆರವಿಗೆ ನಿಂತ ಟ್ರಾಫಿಕ್ ಪೊಲೀಸ್ Video

BRICS ನಾಯಕರ ಭದ್ರತೆಗೆ ನಿಯೋಜಿಸಿದರೆ ಶಾರ್ಪ್ ಶೂಟರ್ ಇಂಥಾ ಕೆಲಸ ಮಾಡೋದಾ: ಏಕ್ ದಂ ಸಸ್ಪೆಂಡ್

Karnataka Weather: ರಾಜ್ಯದಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆಯೇ

ಮುಂದಿನ ಸುದ್ದಿ
Show comments