ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಡಿವಾಳ ಮತ್ತು ಹೆಚ್.ಎಸ್. ಆರ್ ಲೇ ಔಟ್ ವ್ಯಾಪ್ತಿಯಲ್ಲಿ ಓಡಾಡುತ್ತಿರುವ ಕೆಲವು ಟಿಟಿ ವಾಹನಗಳನ್ನು ಸಹ ವಶಕ್ಕೆ ಪಡೆದಿರುವ ಮಡಿವಾಳ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಡಿವಾಳದ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಹೊಸೂರು ರಸ್ತೆ, ಕೋರಮಂಗಲದ ರಸ್ತೆ, ಮಡಿವಾಳ, ಹೆಚ್ಎಸ್ಆರ್ ಲೇ ಔಟ್ ವ್ಯಾಪ್ತಿಯಲ್ಲಿ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ನೊಂದ ಯುವತಿಯ ಪೋಷಕರು ನಗರಕ್ಕೆ ಆಗಮಿಸಿದ್ದು ಮಗಳನ್ನು ಗ್ವಾಲಿಯರ್ಗೆ ಕರೆದೊಯ್ಯುವುದಾಗಿ ತಿಳಿಸಿದ್ದಾರೆ. ತವರಿಗೆ ಮರಳಲಿರುವ ಯುವತಿ ಕೋರ್ಟ್ ವಿಚಾರಣೆಗೆ ಕರೆದಾಗಲೆಲ್ಲ ಬರುವುದಾಗಿ ತಿಳಿಸಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಸೆಪಾಟ್ ನೇತೃತ್ವದಲ್ಲಿ ಮೂರು ತನಿಖಾ ತಂಡಗಳನ್ನು ರಚಿಸಲಾಗಿದೆ.