Webdunia - Bharat's app for daily news and videos

Install App

ಉಪಚುನಾವಣೆಯಲ್ಲಿ ಯಾವ ಪಕ್ಷ ಗೆದ್ದರೆ ಏನಾಗುತ್ತೆ..? ಇಲ್ಲಿದೆ ಸರಳ ವಿಶ್ಲೇಷಣೆ

Webdunia
ಬುಧವಾರ, 12 ಏಪ್ರಿಲ್ 2017 (20:09 IST)
ಮುಂಬರುವ ವಿಧಾನಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಪರಿಗಣಿಸಲಾಗುತ್ತಿರುವ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದೆ. ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಡುವಿನ ಹೋರಾಟ ಎಂದೇ ವಿಶ್ಲೇಷಿಸಲಾಗುತ್ತಿರುವ ಈ  ಉಪಚುನಾವಣಾ ಫಲಿತಾಂಶ ಈ ಇಬ್ಬರೂ ಮಾಸ್ ಲೀಡರ್`ಗಳ ರಾಜಕೀಯ ಭವಿಷ್ಯದಲ್ಲಿ ಭಾರೀ ಪರಿಣಾಮ ಬೀರುತ್ತೆ ಎಂದೇ ಹೇಳಲಾಗುತ್ತಿದೆ. ಇಬ್ಬೀ ನಿರೀರೂ ನಾಯಕರೂ ಫಲಿತಾಂಶದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಗೆದ್ದರೆ ಏನಾಗಬಹುದು.. ಬಿಜೆಪಿ ಗೆದ್ದರೆ ಏನಾಗಬಹುದು ಎಂಬುದರ ಸರಳ ಚಿತ್ರಣ ಇಲ್ಲಿದೆ.

ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ
-      ದೇಶದ ಹಲವೆಡೆ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್`ಗೆ ದೊಡ್ಡ ಬೂಸ್ಟ್ ಸಿಗಲಿದೆ.
-      ಸಿದ್ದರಾಮಯ್ಯನವರ 4 ವರ್ಷಗಳ ಆಡಳಿತ ಮತ್ತು ನಾಯಕತ್ವವನ್ನ ಜನ ಒಪ್ಪಿಕೊಂಡಿದ್ದಾರೆಂದೇ ಬಿಂಬಿಸಬಹುದು.
-      ಮುಂಬರುವ ವಿಧಾನಸಭಾ ಚುನಾವಣೆಯನ್ನ ಸಿದ್ದರಾಮಯ್ಯ ನೇತೃತ್ವದಲ್ಲೇ ಎದುರಿಸಬಹುದು.
-      ಕರ್ನಾಟಕದಲ್ಲಿ ನರೇಂದ್ರಮೋದಿ ಹವಾ ಇಲ್ಲ ಎಂದು ಕಾಂಗ್ರೆಸ್ ಪ್ರಚಾರ ಮಾಡಬಹುದು.
ಮುಂಬರುವ ವಿಧಾನಸಭಾಚುನಾವಣೆಯನ್ನ ಆತ್ಮವಿಶ್ವಾಸದಿಂದ ಎದುರಿಸಬಹುದು
-      ಸಿಎಂ ಸಿದ್ದರಾಮಯ್ಯ ಮಾತಿಗೆ ಹೈಕಮಾಂಡ್ ಬೆಂಬಲ ಸಿಗಬಹುದು. ಬೇರೆ ನ಻ಯಕರು ಚಕಾರ ೆತ್ತಲು ಅಸಾಧ್ಯವಾಗಬಹುದು.

ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದರೆ
-      ಯಡಿಯೂರಪ್ಪನವರ ನಾಯಕತ್ವಕಕೆ ಹೈಕಮಾಂಡ್`ನಿಂದ ಸಂಪೂರ್ಣ ಬೆಂಬಲ ಸಿಗಬಹುದು.
-      ಮುಂದಿನ ಚುನಾವಣೆಗೆ ಇದನ್ನೇ ಟ್ರಂಪ್ ಕಾರ್ಡ್ ಆಗಿ ಬಳಸಬಹುದು
-      ಪ್ರಧಾನಮಂತ್ರಿ ನರೇಂದ್ರಮೋದಿ ಹವಾ ಕರ್ನಾಟಕದಲ್ಲೂ ಇದೆ ಎಂದು ಬಿಂಬಿಸಬಹುದು
-      ಬಿಜೆಪಿ ಮಿಶನ್-150 ಪರಿಕಲ್ಪನೆಗೆ ಮತ್ತಷ್ಟು ಬೂಸ್ಟ್ ಸಿಗಬಹುದು
-      ಯಡಿಯೂರಪ್ಪ ವಿರುದ್ಧ ಪಕ್ಷದಲ್ಲಿ ಎದ್ದಿರುವ ಇತರೆ ನಾಯಕರ ಧ್ವನಿ ತಣ್ಣಗಾಗಬಹುದು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments