Select Your Language

Notifications

webdunia
webdunia
webdunia
webdunia

ಮಹದೇವಪ್ರಸಾದ್ ಸ್ಥಾನ ತುಂಬಲು ಅವರ ಪತ್ನಿ ಗೀತಾ ಸಮ್ಮತಿ!

ಮಹದೇವಪ್ರಸಾದ್ ಸ್ಥಾನ ತುಂಬಲು ಅವರ ಪತ್ನಿ ಗೀತಾ ಸಮ್ಮತಿ!
ಮೈಸೂರು , ಶನಿವಾರ, 7 ಜನವರಿ 2017 (11:28 IST)
ಎಚ್.ಎಸ್.ಮಹದೇವಪ್ರಸಾದ್ ಅವರ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಅವರ ಸ್ಥಾನ ತುಂಬಲು ಅವರ ಧರ್ಮಪತ್ನಿ ಗೀತಾ ಅವರು ಒಪ್ಪಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಎಚ್.ಎಸ್.ಮಹದೇವಪ್ರಸಾದ್ ಅವರ ಪತ್ನಿ ಗೀತಾ ಅವರಿಗೆ ಕರೆ ಮಾಡಿ, ಪ್ರಸಾದ್ ಅವರ ಸ್ಥಾನ ನೀವು ತುಂಬಲೇ ಬೇಕು ಎಂದು ಆಗ್ರಹಿಸಿದ್ದಾರೆ. 
 
ವಿಧಿ ಆಟಕ್ಕೆ ತಲೆ ಬಾಗಲೇ ಬೇಕು. ಆಗಿರುವುದನ್ನು ಮರೆತು ಮುಂದಿನ ರಾಜಕೀಯ ಜೀವನದ ಕಡೆ ಗಮನ ಹರಿಸುವಂತೆ ಪ್ರಸಾದ್ ಪತ್ನಿ ಗೀತಾ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸಿಎಂ ಸೂಚನೆಯಂತೆ ಗೀತಾ ಅವರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. 
 
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿರುವ ಖಾಸಗಿ ರೆಸಾರ್ಟ‌್‌ನಲ್ಲಿ ತಂಗಿದ್ದ ಸಹಕಾರ-ಸಕ್ಕರೆ ಸಚಿವ ಸಚಿವ ಎಚ್.ಸಿ.ಮಹದೇವಪ್ರಸಾದ್ ಅವರು, ಜನವರಿ 3ರಂದು ಹೃದಯಘಾತದಿಂದ ವಿಧಿವಶರಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯರ ಮೇಲೆ ಸಂಸದನ ಹಲ್ಲೆ ಕೇಸ್: ಉ.ಕ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಬಂದ್