Select Your Language

Notifications

webdunia
webdunia
webdunia
webdunia

ಉಪಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ಉಪಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ತೆರೆ
ಬೆಂಗಳೂರು , ಗುರುವಾರ, 11 ಫೆಬ್ರವರಿ 2016 (15:47 IST)
ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 5ಗಂಟೆಗೆ ತೆರೆ ಬೀಳಲಿದೆ. 

ಪ್ರಚಾರದ ಕೊನೆಯ ದಿನವಾದ ಇಂದು ಹೆಬ್ಬಾಳ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿ, ಹಿರಿಯ ನಾಯಕ ಜಾಫರ್ ಶರೀಫ್ ಮೊಮ್ಮಗ ಸಿ.ಕೆ.ಅಬ್ದುಲ್‌ ರೆಹಮಾನ್‌ ಷರೀಫ್‌ ಪರವಾಗಿ ಮತಯಾಚನೆ ಮಾಡಿದರು. 
 
ಇನ್ನು ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಪರ ಪರವಾಗಿ ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಡಿ.ವಿ.ಸದಾನಂದ ಗೌಡ ಪ್ರಚಾರ ನಡೆಸಿದ್ದಾರೆ. 
 
ದೇವದುರ್ಗ ಉಪಚುನಾವಣೆ ಪ್ರಚಾರದಲ್ಲಿ ರೋಡ್‌ ಶೋ ನಡೆಸುತ್ತಿದ್ದ ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಅನೇಕ ಬಿಜೆಪಿ ನಾಯಕರಿದ್ದ ಮಿನಿ ಲಾರಿಯಲ್ಲಿನ ವೇದಿಕೆ ಇದ್ದಕ್ಕಿದ್ದಂತೆ ಕುಸಿಯಿತು. ಇದರಿಂದ ಎಲ್ಲ ನಾಯಕರು ಕೆಲಕ್ಷಣ ಆತಂಕಕ್ಕೆ ಒಳಗಾದರು. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. 
 
ಘಟನೆ ಬಳಿಕ ಸಚಿವರು ಪಾದಯಾತ್ರೆ ಮೂಲಕ ಪಕ್ಷದ ಮತಯಾಚಿಸಿದರು. 

Share this Story:

Follow Webdunia kannada