Select Your Language

Notifications

webdunia
webdunia
webdunia
webdunia

ಚಾಮರಾಜನಗರ ಬಳಿ ಕೆರೆಗೆ ಉರುಳಿದ ಬಸ್: ಮಹಿಳೆ ಸಾವು

ಚಾಮರಾಜನಗರ ಬಳಿ ಕೆರೆಗೆ ಉರುಳಿದ ಬಸ್: ಮಹಿಳೆ ಸಾವು
, ಶುಕ್ರವಾರ, 2 ಮೇ 2014 (11:08 IST)
ಬೆಂಗಳೂರು: ಚಾಮರಾಜನಗರ ಜಿಲ್ಲೆಯಲ್ಲಿ ಕೇರಳದ  ತ್ರಿಶೂರ್‌ಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಮೈಸೂರು ಮೂಲದ ನಿರ್ಮಲ(52) ಎಂಬ ಮಹಿಳೆ ಮೃತಪಟ್ಟಿದ್ದಾರೆ.  25ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದ್ದು ನಾಲ್ಕು ಮಂದಿಯ ಕೈ ತುಂಡಾಗಿದೆ. ಕೆಎ 57 ಎಫ್ 932 ನಂಬರಿನ ಬಸ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿತ್ತು.  

ಚಾಲಕನ ನಿರ್ಲಕ್ಷವೇ ಬಸ್ ಅಪಘಾತಕ್ಕೆ ಕಾರಣವೆಂದು ಹೇಳಲಾಗಿದೆ. ಚಾಮರಾಜನಗರ ಬೆಂಡವಾಡಿ ಬಳಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 
 

Share this Story:

Follow Webdunia kannada