Select Your Language

Notifications

webdunia
webdunia
webdunia
webdunia

ಚಿತ್ರದುರ್ಗ ಎಸಿ ವಿರುದ್ಧ ಲಂಚದ ಆರೋಪ

ಚಿತ್ರದುರ್ಗ ಎಸಿ ವಿರುದ್ಧ ಲಂಚದ ಆರೋಪ
ಚಿತ್ರದುರ್ಗ , ಶುಕ್ರವಾರ, 26 ಫೆಬ್ರವರಿ 2016 (11:17 IST)
ಚಿತ್ರದುರ್ಗ ಜಿಲ್ಲೆ ಉಪವಿಭಾಗಾಧಿಕಾರಿ ವಿರುದ್ಧ ಲಂಚದ ಆರೋಪ ಕೇಳಿ ಬಂದಿದೆ. ಉದ್ಯಮಿ ರಾಜಶೇಖರ್ ಎಸಿ ತಿಪ್ಪೇಸ್ವಾಮಿ ವಿರುದ್ಧ ಲೋಕಾಯುಕ್ತರಿಗೆ ದೂರು ದಾಖಲಿಸಿದ್ದಾರೆ. ಲಂಚದ ಹಣದಲ್ಲಿ ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಸಚಿವರಾದ ಹೆಚ್. ಆಂಜನೇಯ ಮತ್ತು ಅವರ ಕಚೇರಿಯವರಿಗೂ ಪಾಲಿದೆ ಎಂದು ಎಸಿ ತಮಗೆ ಕೊಟ್ಟಿರುವ ಚೀಟಿಯಲ್ಲಿ ಬರೆದಿದ್ದಾರೆ ಎಂದು ರಾಜಶೇಖರ್ ಗಂಭೀರವಾಗಿ ಆರೋಪಿಸಿದ್ದಾರೆ. 
 
ಭೂ ಪರಿವರ್ತನೆಗೆ ತಿಪ್ಪೇಸ್ವಾಮಿ 10 ಲಕ್ಷ ರೂಪಾಯಿ ಲಂಚವನ್ನು ಕೇಳಿದ್ದಾರೆ. ಆ ಲಂಚದಲ್ಲಿ ಸಚಿವರಿಗೆ ಮತ್ತು ಅವರ ಕಚೇರಿಯವರಿಗೆ ಎಷ್ಟೆಟ್ಟು ಪಾಲಿದೆ ಎಂಬುದನ್ನು ಎಸಿ ಚೀಟಿಯಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ ಎಂದಿರುವ ಉದ್ಯಮಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
 
ಪ್ರಕರಣ ದಾಖಲಿಸಿಕೊಂಡು ಲೋಕಾಯಕ್ತ ಅಧಿಕಾರಿಗಳು ಎಸಿಯನ್ನು ಟ್ರ್ಯಾಪ್ ಮಾಡಲು ಹೋದರೆ ಅವರು ನಾಪತ್ತೆಯಾಗಿದ್ದಾರೆ. ಲೋಕಾಯುಕ್ತರ ತನಿಖೆಯ ಬಗ್ಗೆ ಕಚೇರಿಯಂದಲೇ ಮಾಹಿತಿ ಸೋರಿಕೆಯಾಗಿದ್ದು ಹೀಗಾಗಿ ಅವರು ಪಲಾಯನ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. 

Share this Story:

Follow Webdunia kannada