Webdunia - Bharat's app for daily news and videos

Install App

ನಕಲಿ ವೈದ್ಯನ ಚಿಕಿತ್ಸೆಯಿಂದ ಕೈ ಕಳೆದುಕೊಂಡ ಬಾಲಕ

Webdunia
ಸೋಮವಾರ, 4 ಜೂನ್ 2018 (19:53 IST)
ನಕಲಿ ವೈದ್ಯನ ಚಿಕಿತ್ಸೆಯಿಂದ ಕೈ ಕಳೆದುಕೊಂಡ ಬಾಲಕ ಈಗ ನರಳಾಡುತ್ತಿದ್ದಾನೆ. ನಾಟಿ ವೈದ್ಯಕೀಯ ಪದ್ದತಿಗೆ ಬಾಲಕನ ಕೈ ಬಲಿಯಾಗಿದೆ. 
ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಪರಮಣ್ಣ ಬನಗುಂಡಿ ಎಂಬ ನಾಟಿ ವೈದ್ಯನ ಯಡವಟ್ಟು ಚಿಕಿತ್ಸೆಯಿಂದ ಬಾಲಕ ಕೈ ಕಳೆದುಕೊಳ್ಳುವಂತಾಗಿದೆ. 
 
ಕಳೆದ ಏಪ್ರಿಲ್ ತಿಂಗಳಲ್ಲಿ ಲಿಂಗಸೂಗೂರಿನ ಮನೆಯಂಗಳದಲ್ಲಿ 10 ವರ್ಷದ ಆದರ್ಶ ಎಂಬ ಮಗು ಆಟವಾಡುತ್ತಾ ಎಡಗೈ ಮುರಿದುಕೊಂಡಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿ ನಂತರ ಬೇಗ ಗುಣಮುಖವಾಗಲಿದೆ ಎಂಬ ಮಾಹಿತಿ ಮೇರೆಗೆ ಪರಮಣ್ಣನ ಬಳಿ ಚಿಕಿತ್ಸೆ ಕೊಡಿಸಲು ಪೋಷಕರು ಮುಂದಾಗಿದ್ರು. 
 
ಸರ್ಕಾರಿ ವೈದ್ಯರು ಹಾಕಿದ್ದ ಪ್ಲಾಸ್ಟರ್ ತೆಗೆದು ನಾಟಿ ಔಷಧ ಲೇಪಿಸಿ ತಾನೊಂದು ಪಟ್ಟಿಯನ್ನು ಪರಮಣ್ಣ ಹಾಕಿದ್ದ. ಮರುದಿನವೇ ಅಡ್ಡ ಪರಿಣಾಮ ಉಂಟಾಗಿ ನೋವು ಕಾಣಿಸಿಕೊಂಡರೂ 21 ದಿನಗಳವರೆಗೆ  ತಾನು ಹಾಕಿದ್ದ ಪಟ್ಟಿ ತೆಗೆಯದಂತೆ ಹೇಳಿದ್ದನು. ಕೈ ಬಾವು ಮತ್ತಷ್ಟು ಹೆಚ್ಚಾದಾಗ ಪೋಷಕರು ಮತ್ತೊಬ್ಬ ವೈದ್ಯನ ಬಳಿ ಹೋಗಿದ್ದಾರೆ. ಬಾಲಕನ ಕೈ ನರಗಳು ಸತ್ತು ಹೋಗಿವೆ ಅಂತಾ ವೈದ್ಯರು ತಿಳಿಸಿದ್ದಾರೆ. 
 
ಪೋಷಕರು ಕೂಡಲೇ ಮಹರಾಷ್ಟ್ರದ ಮೀರಜ್ ಗೆ ತೆರಳಿ ಚಿಕಿತ್ಸೆಕೊಡಿಸಲು ಮುಂದಾದ್ರೂ, ಕೈ ಕತ್ತರಿಸಬೇಕೆಂದು ವೈದ್ಯರು ಸಲಹೆ ನೀಡಿ ಕತ್ತರಿಸಿದ್ದಾರೆ. ನಾಟಿ ವೈದ್ಯನ ಅವೈಜ್ಞಾನಿಕ ಚಿಕಿತ್ಸಾ ಪದ್ಧತಿಗೆ ಬಾಲಕನೋರ್ವನ ಕೈ  ಕತ್ತರಿಸಬೇಕಾಯ್ತು. 
 
ನಾಟಿ ವೈದ್ಯನ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅವೈಜ್ಞಾನಿಕ ಪದ್ಧತಿಗಳ ಬಗ್ಗೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಕ್ರಮವಹಿಸಬೇಕಿದೆ, ತಮಗೆ ನ್ಯಾಯ ಒದಗಿಸಿ ಎಂಬುದು ಪೋಷಕರು ಒತ್ತಾಯ ಮಾಡಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

Karnataka Weather: ಬೆಂಗಳೂರಿಗರಿಗೂ ಎಚ್ಚರ, ರಾಜ್ಯದ ಹವಾಮಾನ ಪರಿಸ್ಥಿತಿ ಹೇಗಿದೆ ನೋಡಿ

ಮುಂದಿನ ಸುದ್ದಿ
Show comments