Select Your Language

Notifications

webdunia
webdunia
webdunia
webdunia

ಚಿಲ್ಲರೆ ಕೇಳಿದ ಮಹಿಳೆ ಮೇಲೆ ಹಲ್ಲೆ ನಡೆಸಿದ ಬಿಎಂಟಿಸಿ ಕಂಡಕ್ಟರ್..?

ಚಿಲ್ಲರೆ ಕೇಳಿದ ಮಹಿಳೆ ಮೇಲೆ ಹಲ್ಲೆ ನಡೆಸಿದ ಬಿಎಂಟಿಸಿ ಕಂಡಕ್ಟರ್..?
bengaluru , ಭಾನುವಾರ, 12 ಮಾರ್ಚ್ 2017 (16:07 IST)
ಚಿಲ್ಲರೆ ಕೇಳಿದ ಮಹಿಳೆ ಮೇಲೆ ಬಿಎಂಟಿಸಿ ಬಸ್ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ನಿನ್ನೆ ರಾತ್ರಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.

250ಜೆ ಬಸ್`ನಲ್ಲಿ ಬಂದ ಲಕ್ಷ್ಮೀ ಎಂಬ ಮಹಿಳೆ ಮಗುವಿನ ಜೊತೆ ಮೆಜೆಸ್ಟಿಕ್`ನಲ್ಲಿ ಇಳಿದಿದ್ದಾರೆ. 80 ರೂಪಾಯಿ ಚಿಲ್ಲರೆ ಕೊಡಬೇಕಿದ್ದ ಕಂಡಕ್ಟರ್ 74 ರೂ. ಮಾತ್ರ ನೀಡಿದ್ದಾನೆ. ಉಳಿದ ಚಿಲ್ಲರೆ ಕೊಡು ಎಂದು ಕೇಳಿದಾಗ ಮಾತಿಗೆ ಮಾತು ಬೆಳೆದು ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಕರಣ ಸಂಬಂಧ ಕಂಡಕ್ಟರ್ ಉದಯ್ ಕುಮಾರ್`ನನ್ನ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ನಿರ್ವಾಹಕರ ದೌರ್ಜನ್ಯ ಹೆಚ್ಚುತ್ತಿದ್ದು, ಸ್ಟಾಪ್ ಬಿಟ್ಟು ಎಲ್ಲೆಂದರಲ್ಲಿ ಸ್ಟಾಪ್ ಕೊಡುವುದು, ಬೇಕಾಬಿಟ್ಟಿ ಬಸ್ ಚಾಲಿಸುವುದು ಮುಂತಾದ ಆರೋಪಗಳು ಹೆಚ್ಚಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ಲಾರಿಡಾದಲ್ಲಿ ಭಾರತೀಯನ ಅಂಗಡಿಗೆ ಬೆಂಕಿ ಹಚ್ಚಲು ಯತ್ನ