Select Your Language

Notifications

webdunia
webdunia
webdunia
webdunia

ಬಿಜೆಪಿ ಶಾಸಕ ಜಗದೀಶ್ ಕುಮಾರ್ ಹೃದಯಾಘಾತದಿಂದ ವಿಧಿವಶ

ಬಿಜೆಪಿ ಶಾಸಕ ಜಗದೀಶ್ ಕುಮಾರ್  ಹೃದಯಾಘಾತದಿಂದ ವಿಧಿವಶ
ಬೆಂಗಳೂರು , ಸೋಮವಾರ, 23 ನವೆಂಬರ್ 2015 (18:33 IST)
ಬೆಂಗಳೂರು:  ಹೆಬ್ಬಾಳ ಕ್ಷೇತ್ರದ ಬಿಜೆಪಿ ಶಾಸಕ ಆರ್. ಜಗದೀಶ್ ಕುಮಾರ್ ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಜಗದೀಶ್ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು.

ಅವರಿಗೆ 58 ವರ್ಷಗಳಾಗಿದ್ದು, ವಿಕ್ರಂ ಆಸ್ಪತ್ರೆಯಲ್ಲಿ  ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ.  ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಜಗದೀಶ್  ಬೆಳಿಗ್ಗೆ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ವಿಧಾನಸಭೆ ಕಲಾಪದಲ್ಲಿ ಪಾಲ್ಗೊಂಡಿದ್ದ ಜಗದೀಶ್,  ಬಿಜೆಪಿ ಸದನದ ಭಾವಿಗಿಳಿದು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಅವರು ಕೂಡ ಭಾಗಿಯಾಗಿದ್ದರು.  ಮಧ್ಯಾಹ್ನದ ನಂತರ ಜಗದೀಶ್‌ಗೆ ಹೃದಯಾಘಾತವಾದ್ದರಿಂದ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು.

 ಸಾವಿಗೆ ಒಂದು ಗಂಟೆ ಮುಂಚೆ ಜಗದೀಶ್ ಕುಮಾರ್ ಫೇಸ್‌ಬುಕ್‌ನಲ್ಲಿ ಹಬ್ಬದ ಶುಭಾಶಯ ಹೇಳಿದ್ದರು. ಜಗದೀಶ್ ಕುಮಾರ್ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಆಪ್ತರಾಗಿದ್ದರು. ಜಗದೀಶ್ ಕುಮಾರ್ ಕೇಸರಿ ಶಾಲನ್ನು ಧರಿಸಿ ಪ್ರತಿನಿತ್ಯ ಆಗಮಿಸುತ್ತಿದ್ದರು. ಎಲ್ಲಾ ರೀತಿಯ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. 

Share this Story:

Follow Webdunia kannada