Select Your Language

Notifications

webdunia
webdunia
webdunia
webdunia

ಗುಂಡ್ಲುಪೇಟೆಗೆ ಕನಕಪುರ ಗೂಂಡಾಗಳು ಬಂದಿದ್ದಾರೆ: ತೇಜಸ್ವಿನಿ ರಮೇಶ್ ಆರೋಪ

ಗುಂಡ್ಲುಪೇಟೆಗೆ ಕನಕಪುರ ಗೂಂಡಾಗಳು ಬಂದಿದ್ದಾರೆ: ತೇಜಸ್ವಿನಿ ರಮೇಶ್ ಆರೋಪ
ಗುಂಡ್ಲುಪೇಟೆ , ಬುಧವಾರ, 5 ಏಪ್ರಿಲ್ 2017 (13:32 IST)
ಉಪಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ಆರೋಪ-ಪ್ರತ್ಯಾರೋಪಗಳು ಸಹ ಜೋರಾಗುತ್ತಿವೆ. ಕನಕಪುರ ಗೂಂಡಾಗಳು ಗುಂಡ್ಲುಪೇಟೆಗೆ ಬಂದಿದ್ದಾರೆ, ಮಹಿಳೆಯರು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ಆರೋಪಿಸಿದ್ದಾರೆ.

ಇದೇವೇಳೆ, ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್`ನ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ಯು.ಟಿ. ಖಾದರ್ ಮುಂತಾದ ನಾಯಕರನ್ನ ಕ್ಷೇತ್ರದಿಂದ ಹೊರಹಾಕಬೇಕೆಂದು ತೇಜಸ್ವಿನಿ ರಮೇಶ್ ಚುನಾವಣಾ ಆಯೋಗವನ್ನ ಒತ್ತಾಯಿಸಿದ್ದಾರೆ.

ಸೋಲಿನ ಹತಾಶೆಯಿಂದ ಕಾಂಗ್ರೆಸ್ ನಾಯಕರು ಅಡ್ಡದಾರಿ ಹಿಡಿದಿದ್ದಾರೆ. ಸ್ತ್ರೀಶಕ್ತಿಗಳಿಗೆ ಹಣ ಹಂಚಲಾಗುತ್ತಿದೆ. ಬಿಜೆಪಿ ಹೆಣ್ಣುಮಕ್ಕಳಿರುವ ಕೊಠಡಿಗಳನ್ನ ಪೊಲೀಸರಿಂದ ತಪಾಸಣೆ ನಡೆಸಲಾಗುತ್ತಿದೆ ಎಂದು ತೇಜಸ್ವಿನಿ ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ, ಸಿದ್ರಾಮಯ್ಯ ಮಾತ್ರ ಮೋದಿ ನಾಯಕತ್ವ ಒಪ್ಪಿಕೊಂಡಿಲ್ಲ: ಈಶ್ವರಪ್ಪ