Webdunia - Bharat's app for daily news and videos

Install App

ರಾಹುಲ್, ದಿಗ್ವಿಜಯ್, ಪರಮೇಶ್ವರ್‌ರೊಂದಿಗೆ ರಮ್ಯ ಪಾಕ್‌ನಲ್ಲಿ ನೆಲಸಲಿ: ಪ್ರಹ್ಲಾದ್ ಜೋಷಿ

Webdunia
ಭಾನುವಾರ, 21 ಆಗಸ್ಟ್ 2016 (13:28 IST)
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ,  ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ಪರಮೇಶ್ವರ್ ಅವರೊಂದಿಗೆ ರಮ್ಯ ಪಾಕಿಸ್ತಾನದಲ್ಲಿಯೇ ನೆಲಸಲಿ. ಹೇಗಿದ್ದರೂ ಕಾಂಗ್ರೆಸ್ ಪಕ್ಷ ದೇಶ ವಿರೋಧಿಗಳನ್ನು ಬೆಂಬಲಿಸುತ್ತದೆ ಎಂದು ಬಿಜೆಪಿ ಮುಖಂಡ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದ್ದಾರೆ.
 
ಪಾಕಿಸ್ತಾನದ ಕುರಿತು ನಟಿ ರಮ್ಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಪಾಕಿಸ್ತಾನ ಒಳ್ಳೆಯ ದೇಶವಾಗಿದ್ದರೆ ರಮ್ಯ ತಮ್ಮ ನಾಯಕರೊಂದಿಗೆ ತೆರಳಿ ಅಲ್ಲಿಯೇ ನೆಲೆಸುವುದು ಸೂಕ್ತವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
 
ಬಿಜೆಪಿ ಕಾರ್ಯಕರ್ತರು ಮುಖಂಡ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ, ರಮ್ಯ ಪ್ರತಿಕೃತಿಯನ್ನು ದಹಿಸಿ ಘೋಷಣೆಗಳನ್ನು ಕೂಗಿದರು.
 
ಪಾಕಿಸ್ತಾನಕ್ಕೆ ಹೋಗುವುದು ನರಕಕ್ಕೆ ಹೋದಂತೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ರಮ್ಯ, ಪಾಕಿಸ್ತಾನದಲ್ಲಿ ಅಂತಹ ವಾತಾವರಣವಿಲ್ಲ. ಅಲ್ಲಿಯ ಜನ ಒಳ್ಳೆಯವರು ಎಂದು ಹೇಳಿಕೆ ನೀಡಿದ್ದರು.
 
ಪಾಕಿಸ್ತಾನದಲ್ಲಿರುವ ಜನರು ನಮ್ಮಂತೆಯೇ ಇದ್ದಾರೆ. ಪ್ರತಿಯೊಬ್ಬ ಪಾಕಿಸ್ತಾನಿಯ ಕೆಟ್ಟ ವ್ಯಕ್ತಿಯಲ್ಲ. ಅವರ ವರ್ತನೆ ನಮ್ಮಂತೆಯೇ ಇದೆ ಎಂದು ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments