Select Your Language

Notifications

webdunia
webdunia
webdunia
webdunia

ರಾಹುಲ್, ದಿಗ್ವಿಜಯ್, ಪರಮೇಶ್ವರ್‌ರೊಂದಿಗೆ ರಮ್ಯ ಪಾಕ್‌ನಲ್ಲಿ ನೆಲಸಲಿ: ಪ್ರಹ್ಲಾದ್ ಜೋಷಿ

ರಾಹುಲ್, ದಿಗ್ವಿಜಯ್, ಪರಮೇಶ್ವರ್‌ರೊಂದಿಗೆ ರಮ್ಯ ಪಾಕ್‌ನಲ್ಲಿ ನೆಲಸಲಿ: ಪ್ರಹ್ಲಾದ್ ಜೋಷಿ
ಹುಬ್ಬಳ್ಳಿ , ಭಾನುವಾರ, 21 ಆಗಸ್ಟ್ 2016 (13:28 IST)
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ,  ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ಪರಮೇಶ್ವರ್ ಅವರೊಂದಿಗೆ ರಮ್ಯ ಪಾಕಿಸ್ತಾನದಲ್ಲಿಯೇ ನೆಲಸಲಿ. ಹೇಗಿದ್ದರೂ ಕಾಂಗ್ರೆಸ್ ಪಕ್ಷ ದೇಶ ವಿರೋಧಿಗಳನ್ನು ಬೆಂಬಲಿಸುತ್ತದೆ ಎಂದು ಬಿಜೆಪಿ ಮುಖಂಡ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದ್ದಾರೆ.
 
ಪಾಕಿಸ್ತಾನದ ಕುರಿತು ನಟಿ ರಮ್ಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಪಾಕಿಸ್ತಾನ ಒಳ್ಳೆಯ ದೇಶವಾಗಿದ್ದರೆ ರಮ್ಯ ತಮ್ಮ ನಾಯಕರೊಂದಿಗೆ ತೆರಳಿ ಅಲ್ಲಿಯೇ ನೆಲೆಸುವುದು ಸೂಕ್ತವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
 
ಬಿಜೆಪಿ ಕಾರ್ಯಕರ್ತರು ಮುಖಂಡ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ, ರಮ್ಯ ಪ್ರತಿಕೃತಿಯನ್ನು ದಹಿಸಿ ಘೋಷಣೆಗಳನ್ನು ಕೂಗಿದರು.
 
ಪಾಕಿಸ್ತಾನಕ್ಕೆ ಹೋಗುವುದು ನರಕಕ್ಕೆ ಹೋದಂತೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ರಮ್ಯ, ಪಾಕಿಸ್ತಾನದಲ್ಲಿ ಅಂತಹ ವಾತಾವರಣವಿಲ್ಲ. ಅಲ್ಲಿಯ ಜನ ಒಳ್ಳೆಯವರು ಎಂದು ಹೇಳಿಕೆ ನೀಡಿದ್ದರು.
 
ಪಾಕಿಸ್ತಾನದಲ್ಲಿರುವ ಜನರು ನಮ್ಮಂತೆಯೇ ಇದ್ದಾರೆ. ಪ್ರತಿಯೊಬ್ಬ ಪಾಕಿಸ್ತಾನಿಯ ಕೆಟ್ಟ ವ್ಯಕ್ತಿಯಲ್ಲ. ಅವರ ವರ್ತನೆ ನಮ್ಮಂತೆಯೇ ಇದೆ ಎಂದು ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಂಸದೆ ರಮ್ಯ ವಿರುದ್ಧ ಜಗ್ಗೇಶ್ ಆಕ್ರೋಶ