Webdunia - Bharat's app for daily news and videos

Install App

ಬಿಎಸ್‌ವೈ ಎದುರಲ್ಲೇ ರೈತರ ಮೇಲೆ ಮಾಜಿ ಸಚಿವನ ದರ್ಪ

Webdunia
ಮಂಗಳವಾರ, 23 ಮೇ 2017 (18:06 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಸಮ್ಮುಖದಲ್ಲಿಯೇ ಬಿಜೆಪಿಯ ಮಾಜಿ ಸಚಿವ ಕಳಕಪ್ಪ ಬಂಡಿ ರೈತನೊಬ್ಬನ ಮೇಲೆ ದರ್ಪ ತೋರಿದ ಘಟನೆ ವರದಿಯಾಗಿದೆ.
 
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ರೈತನೊಬ್ಬ ತನ್ನ ಸಮಸ್ಯೆಯನ್ನು ಹೇಳಲು ಪ್ರಯತ್ನಿಸಿದಾಗ ಮಾಜಿ ಸಚಿವ ಬಂಡಿ ಆತನನ್ನು ವೇದಿಕೆಯಿಂದ ತಳ್ಳಿ ಹೊರಹಾಕಿ ಅಪಮಾನ ಮಾಡಿದ್ದಾರೆ ಎನ್ನಲಾಗಿದೆ. 
 
ಯಡಿಯೂರಪ್ಪ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ರೈತನೊಬ್ಬ ಮಹಾದಾಯಿ ಬಗ್ಗೆ ಹೇಳಿಕೆ ನೀಡಿ ಎಂದು ಒತ್ತಾಯಿಸಿದಾಗ ವೇದಿಕೆಯಿಂದ ಕೆಳಗೆ ಬಂದ ಕಳಕಪ್ಪ ಬಂಡಿ, ರೈತನನ್ನು ಹೊರಹಾಕಿ ನಂತರ ಮತ್ತೊಬ್ಬ ರೈತನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
 
ಯಡಿಯೂರಪ್ಪ ಮುಂದೆ ರೋಷಾವೇಶ ತೋರಿದ ಬಂಡಿ, ಸ್ಥಳದಲ್ಲಿ ಉಪಸ್ಥಿತರಿದ್ದ ರೈತರ ಮೇಲೆ ಆಕ್ರೋಶ ತೋರಿ ಅಪಮಾನವೆಸಗಿದರು. ಸಮಸ್ಯೆ ಹೇಳಲು ಬಂದ ರೈತನ ಮೇಲೆ ದರ್ಪ ತೋರಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments