Select Your Language

Notifications

webdunia
webdunia
webdunia
webdunia

ಬಿಎಸ್‌ವೈ ಎದುರಲ್ಲೇ ರೈತರ ಮೇಲೆ ಮಾಜಿ ಸಚಿವನ ದರ್ಪ

ಬಿಎಸ್‌ವೈ ಎದುರಲ್ಲೇ ರೈತರ ಮೇಲೆ ಮಾಜಿ ಸಚಿವನ ದರ್ಪ
ಗದಗ , ಮಂಗಳವಾರ, 23 ಮೇ 2017 (18:06 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಸಮ್ಮುಖದಲ್ಲಿಯೇ ಬಿಜೆಪಿಯ ಮಾಜಿ ಸಚಿವ ಕಳಕಪ್ಪ ಬಂಡಿ ರೈತನೊಬ್ಬನ ಮೇಲೆ ದರ್ಪ ತೋರಿದ ಘಟನೆ ವರದಿಯಾಗಿದೆ.
 
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ರೈತನೊಬ್ಬ ತನ್ನ ಸಮಸ್ಯೆಯನ್ನು ಹೇಳಲು ಪ್ರಯತ್ನಿಸಿದಾಗ ಮಾಜಿ ಸಚಿವ ಬಂಡಿ ಆತನನ್ನು ವೇದಿಕೆಯಿಂದ ತಳ್ಳಿ ಹೊರಹಾಕಿ ಅಪಮಾನ ಮಾಡಿದ್ದಾರೆ ಎನ್ನಲಾಗಿದೆ. 
 
ಯಡಿಯೂರಪ್ಪ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ರೈತನೊಬ್ಬ ಮಹಾದಾಯಿ ಬಗ್ಗೆ ಹೇಳಿಕೆ ನೀಡಿ ಎಂದು ಒತ್ತಾಯಿಸಿದಾಗ ವೇದಿಕೆಯಿಂದ ಕೆಳಗೆ ಬಂದ ಕಳಕಪ್ಪ ಬಂಡಿ, ರೈತನನ್ನು ಹೊರಹಾಕಿ ನಂತರ ಮತ್ತೊಬ್ಬ ರೈತನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
 
ಯಡಿಯೂರಪ್ಪ ಮುಂದೆ ರೋಷಾವೇಶ ತೋರಿದ ಬಂಡಿ, ಸ್ಥಳದಲ್ಲಿ ಉಪಸ್ಥಿತರಿದ್ದ ರೈತರ ಮೇಲೆ ಆಕ್ರೋಶ ತೋರಿ ಅಪಮಾನವೆಸಗಿದರು. ಸಮಸ್ಯೆ ಹೇಳಲು ಬಂದ ರೈತನ ಮೇಲೆ ದರ್ಪ ತೋರಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳಿನ 8 ಖ್ಯಾತ ನಟರ ವಿರುದ್ಧ ಜಾಮೀನು ರಹಿತ ವಾರಂಟ್