Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಗದ್ದುಗೆ ಏರಲು ಬಿಜೆಪಿಯಿಂದಲೂ ಕಸರತ್ತು: ಹಿರಿಯ ನಾಯಕರ ಸಭೆ

ಬಿಬಿಎಂಪಿ ಗದ್ದುಗೆ ಏರಲು ಬಿಜೆಪಿಯಿಂದಲೂ ಕಸರತ್ತು: ಹಿರಿಯ ನಾಯಕರ ಸಭೆ
ಬೆಂಗಳೂರು , ಗುರುವಾರ, 3 ಸೆಪ್ಟಂಬರ್ 2015 (12:17 IST)
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಬಿಎಂಪಿ ಗದ್ದುಗೆ ಏರುವ ಸಂಬಂಧ ಕ್ಷಣಗಣನೆ ಎಣಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಕೂಡ ತನ್ನ ಕಸರತ್ತನ್ನು ನಡೆಸುತ್ತಿದ್ದು, ಇಂದು ಪಕ್ಷದ ಹಿರಿಯ ನಾಯಕರ ಸಭೆ ಕರೆದು ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಸಂಬಂಧ ಚರ್ಚೆ ನಡೆಸುದೆ. 
 
ನಗರದ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಘಟಕದ ಮುಖ್ಯ ಕಚೇರಿಯಲ್ಲಿ ಸಭೆ ನಡೆಯುತ್ತಿದ್ದು, ಸಭೆಯ ಅಧ್ಯಕ್ಷತೆಯನ್ನು ಚುನಾವಣಾ ನೇತೃತ್ವ ವಹಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರು ವಹಿಸಿದ್ದಾರೆ. 
 
ಸೆ.11ರಂದು ಮೇಯರ್, ಉಪ ಮೇಯರ್ ಹಾಗೂ 12 ಸ್ಥಾಯಿ ಸಮಿತಿಗಳ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಕಸರತ್ತು ನಡೆಸುತ್ತಿದ್ದು, ಸಭೆಯಲ್ಲಿ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಸಂಬಂಧ ಚರ್ಚಿಸಲಾಗುತ್ತಿದೆ ಎಂದು ಹೇಳಲಾಗಿದೆ. 
 
ಇನ್ನು ಸಭೆಯಲ್ಲಿ ಪಕ್ಷದ ಮಾಜಿ ಮೇಯರ್‌ಗಳು, ಮಾಜಿ ಸಚಿವರು, ಹಾಲಿ ಹಾಗೂ ಮಾಜಿ ಶಾಸಕರು ಮತ್ತು ಕಾರ್ಪೊರೇಟರ್‌ಗಳು, ಭಾಗಿಯಾಗಿದ್ದಾರೆ. 

Share this Story:

Follow Webdunia kannada