Webdunia - Bharat's app for daily news and videos

Install App

ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಬೀದರ್ ಜಿಲ್ಲೆಯ ಹೆಮ್ಮೆಯ ಪುತ್ರಿ

Webdunia
ಸೋಮವಾರ, 25 ಜುಲೈ 2016 (12:30 IST)
ಬೀದರ್ ಜಿಲ್ಲೆಯ ಅಪೂರ್ವಾ ಘಾಳೆ ಜುಲೈ 30 ರಂದು ಮುಂಬೈಯಲ್ಲಿ ನಡೆಯಲಿರುವ ಮಿಸ್ ಯುನಿವರ್ಸ್ ಪ್ರಿ-ಫೈನಲ್ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಹೈದ್ರಾಬಾದ್‌ನಲ್ಲಿ ತಮ್ಮ ಮಾಡೆಲ್ ಪ್ರೊಫೆಶನ್‌ನಲ್ಲಿ ಮುಂದುವರಿಸಿರುವ ಅಪೂರ್ವಾ ಯಮಹಾ ಫಾಸಿನೋ ಮಿಸ್ ದಿವಾ 2016 ಸೌದರ್ಯ ಸ್ಪರ್ಧೆಯಲ್ಲಿ ಫೈನಲ್ ಹಂತವನ್ನು ತಲುಪಿದ್ದಾರೆ. 
 
ಒಂದು ವೇಳೆ ಮುಂಬೈಯಲ್ಲಿ ಜುಲೈ 30 ರಂದು ನಡೆಯಲಿರುವ ಮಿಸ್ ಯುನಿವರ್ಸ್ ಪ್ರಿ-ಫೈನಲ್ ಸ್ಪರ್ಧೆಯಲ್ಲಿ ಜಯಗಳಿಸಿದಲ್ಲಿ ವರ್ಷಾಂತ್ಯಕ್ಕೆ ನಡೆಯಲಿರುವ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದ್ದಾರೆ.
 
ಹೈದ್ರಾಬಾದ್‌ನಲ್ಲಿ ಜುಲೈ 10 ರಂದು ನಡೆದ ಪ್ರಿಲಿಮಿನರಿ ಸ್ಪರ್ಧೆಯಲ್ಲಿ 30 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಅದರಲ್ಲಿ ಅಪೂರ್ವಾ 6ನೇ ಸ್ಥಾನ ಪಡೆದಿದ್ದರು. 
ಅಪೂರ್ವಾ ಕುಟುಂಬ ಮೂಲತಃ ಜಿಲ್ಲೆಯ ಔರಾದ್ ತಾಲೂಕಿನ ಸೋನಾಳ ಗ್ರಾಮದವರಾಗಿದ್ದು ಅವರ ತಂದೆ ಜಯಶಂಕರ್ ಘಾಳೆ ಬೀದರ್‌ನಲ್ಲಿ ಕೈಗಾರಿಕಾ ಉದ್ಯಮಿಯಾಗಿದ್ದಾರೆ.
 
ಬ್ಯೂಟಿ ಕ್ವೀನ್ ಆಗಬೇಕು ಎನ್ನುವುದು ನನ್ನ ಬಾಲ್ಯದ ಕನಸಾಗಿತ್ತು. ಆದ್ದರಿಂದ ಸೌಂದರ್ಯ ಸ್ಪರ್ಧೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೆ. ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡವರು ಯಾವ ರೀತಿ ತಮ್ಮ ಪ್ರತಿಭೆಯನ್ನು ತೋರುತ್ತಾರೆ ಎನ್ನುವ ಬಗ್ಗೆ ವಿಡಿಯೋಗಳನ್ನು ನೋಡುತ್ತಿದ್ದೆ. ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಬೇಕಾದಲ್ಲಿ ಫಿಟ್‌ನೆಸ್ ಕಾಪಾಡಿಕೊಳ್ಳುವುದು ತುಂಬಾ ಅಗತ್ಯ. ಆದ್ದರಿಂದ, ನಿರಂತರವಾಗಿ ಯೋಗಾ, ವ್ಯಾಯಾಮ ಮುಂದುವರಿಸುವುದು ಸೂಕ್ತ. ಮುಂಬೈಯಲ್ಲಿ ನಡೆಯಲಿರುವ ಪ್ರಿ-ಫೈನಲ್ ಸ್ಪರ್ಧೆಯಲ್ಲಿ ಜಯಶಾಲಿಯಾಗಲು ಅವಿರತವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಅಪೂರ್ವಾ ಘಾಳೆ ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

19ಮಾಜಿ ಮಂತ್ರಿಗಳ ಭದ್ರತೆ ಕೈಬಿಟ್ಟ ಗೃಹ ಸಚಿವಾಲಯ, ಆದರೆ ಸ್ಮೃತಿ ಇರಾನಿಗೆ ಯಾಕೆ ಈ ವಿಶೇಷತೆ

ಛತ್ತೀಸ್‌ಗಢ: ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮಹಿಳಾ ಮಾವೋವಾದಿ ಹತ್ಯೆ

ಮದ್ಯದ ಬೆಲೆ ಕೇಳಿಯೇ ನಶೆ ಏರುವಂತಾಗಿದೆ: ಬಿಜೆಪಿ ವ್ಯಂಗ್ಯ

Suhas Shetty Case: ಹತ್ಯೆ ಹಿಂದೆ ಬಜ್ಪೆ ಹೆಡ್‌ ಕಾನ್‌ಸ್ಟೇಬಲ್‌ ಭಾಗಿಯಾಗಿರುವ ಶಂಕೆ

Suhas Shetty Case: ಯುಟಿ ಖಾದರ್ ಸ್ಪೀಕರ್‌ ಆಗಿರುವವರೆಗೆ ಸಾವಿಗೆ ನ್ಯಾಯ ಸಿಗುವ ನಂಬಿಕೆಯಿಲ್ಲ

ಮುಂದಿನ ಸುದ್ದಿ
Show comments