Select Your Language

Notifications

webdunia
webdunia
webdunia
webdunia

ಭಾರ್ತಿ ವಿರುದ್ಧ ಕೌಟುಂಬಿಕ ಕಿರುಕುಳ ಆರೋಪ: ಜಾಮೀನು ಮಂಜೂರು

ಭಾರ್ತಿ ವಿರುದ್ಧ ಕೌಟುಂಬಿಕ ಕಿರುಕುಳ ಆರೋಪ: ಜಾಮೀನು ಮಂಜೂರು
ನವದೆಹಲಿ , ಬುಧವಾರ, 7 ಅಕ್ಟೋಬರ್ 2015 (14:24 IST)
ಕೌಟುಂಬಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದ ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರಿಗೆ ಇಲ್ಲಿನ ದ್ವಾರಕಾ ಕೋರ್ಟ್ ಇಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 
 
ಭಾರ್ತಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಕೋರ್ಟ್, 1 ಲಕ್ಷ ರೂ. ಶ್ಯೂರಿಟಿ ನೀಡಿ ಬಳಿಕ ಹೊರ ತೆರಳುವಂತೆ ಷರತ್ತು ಬದ್ಧ ಜಾಮೀನು ನೀಡಿದೆ. 
 
ಇನ್ನು ಭಾರ್ತಿ ವಿರುದ್ಧ ಅವರ ಪತ್ನಿ ಲಿಪಿಕಾ ಮಿತ್ರ ಅವರು ದೂರು ದಾಖಲಿಸಿ ಮಾನಿಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸುತ್ತಿದ್ದು, ಹತ್ಯೆ ಮಾಡಲೂ ಕೂಡ ಪ್ರಯತ್ನಿಸಿದ್ದಾರೆ. ಅಲ್ಲದೆ ಒಮ್ಮೆ ನಾಯಿಯಿಂದ ಕಚ್ಚಿಸಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಸೆ.29ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಭಾರ್ತಿ ಇಂದು ಅಂತಿಮವಾಗಿ ಬಿಡುಗಡೆಯಾಗುತ್ತಿದ್ದಾರೆ. 

Share this Story:

Follow Webdunia kannada