ಬಂದ್ ಪರಿಣಾಮ: ಕೋಲಾರದಲ್ಲಿ ಮದುವೆ ಮನಎಗೆ ಜನರೇ ಇಲ್ಲ

Webdunia
ಸೋಮವಾರ, 12 ಜೂನ್ 2017 (13:28 IST)
ಕೋಲಾರ:ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ್ ಬಂದ್ ಗೆ ಕೋಲಾರದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ವಕಿಲರೊಬ್ಬರ ಮಗನ ಮದುವೆಗೆ ಜನರೇ ಬಾರದ ಹಿನ್ನಲೆಯಲ್ಲಿ ಮದುವೆಗೆಂದು ತಯಾರಿಸಿದ ಊಟವೆಲ್ಲ ಉಳಿದುಹೋಗಿದೆ.
 
ಇಲ್ಲಿನ ನಾರಾಯಣಿ ಕಲ್ಯಾಣ ಮಂಟಪದಲ್ಲಿ ವಕೀಲ ಕೋದಂಡಪ್ಪ ಅವರ ಮಗ ವಿರೇಂದ್ರ ಹಾಗೂ ಚಿತ್ರಾ ಅವರ ವಿವಾಹ ನಿಗದಿಯಾಗಿತ್ತು. ಆದರೆ ಬಂದ್ ನಿಂದಾಗಿ ಮದುವೆಗೆ ಜನರೇ ಇಲ್ಲದಂತಾಗಿದ್ದು, ತಯಾರಿಸಿದ ಊಟವೆಲ್ಲ ಹಾಗೇ ಉಳಿದುಬಿಟ್ಟಿದೆ.
 
ಕಳಸಾಬಂಡೂರಿ, ಮಹದಾಯಿ ಯೋಜನೆ, ರೈತರ ಸಾಲ ಮನ್ನಾಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಕೋಲಾರದಾದ್ಯಂತ್ ಭಾರೀ ಬೆಂಬಲ ವ್ಯಕ್ತವಾಗಿದೆ. ಪ್ರತಿಭಟನಾಕಾರರು ಬೀದಿಗಿಳಿದು ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ನಡುವೆ ಮದುವೆ ಮನೆಗೆ ಜನ ಬಾರದೇ ಊಟ್ ಉಳಿದು ಹೋಗಿದ್ದರಿಂದ ಮದುವೆ ಮನೆಗೆ ಬಂದ ಪ್ರತಿಭಟನಾಕಾರರು ಭರ್ಜರಿ ಮದುವೆ ಊಟ  ಸವಿದು ತೆರಳಿದ್ದಾರೆ. ಹೀಗಾಗಿ ಪ್ರತಿಭಟನೆ ಜತೆ ಭರ್ಜರಿ ಊಟವೂ ಪ್ರತಿಭಟನಾ ನಿರತರಿಗೆ ಸಿಕ್ಕಿದಂತಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್, ಕೊನೆಗೂ ಜೈಲಿಂದ್ದ ಬೈರತಿ ಬಸವರಾಜ್ ರಿಲೀಸ್

ಸಿದ್ದಾಪುರ ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆಗೆ

ನೀನು ಹಾಗೆ ಕುಣಿಕೆ ಕಟ್ಟಬಾರದು, ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಪತ್ನಿಗೆ ಸೂಚಿಸಿದ ಪತಿ, ಮುಂದೇನಾಯ್ತು

ಚುನಾವಣೆ ಹತ್ತಿರ ಬೆನ್ನಲ್ಲೇ 5 ಅಭಿವೃದ್ಧಿ ಮಂಡಳಿ ಘೋಷಿಸಿದ ಮಮತಾ ಬ್ಯಾನರ್ಜಿ

ಲವ್ ಜಿಹಾದ್‌, ಮತಾಂತರ ಇಲ್ಲ: ಮದುವೆ ಬಗ್ಗೆ ಮೊನಲಿಸಾ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments