Webdunia - Bharat's app for daily news and videos

Install App

ಬೆಂಗಳೂರು ನೀರು ಕುಡಿದ್ರೆ, ಕ್ಯಾನ್ಸರ್ ಫ್ರೀ?

Webdunia
ಶುಕ್ರವಾರ, 28 ಅಕ್ಟೋಬರ್ 2016 (19:02 IST)
ಬೆಂಗಳೂರು: ಸಿಲಿಕಾನ್ ಸಿಟಿ.. ಗಾರ್ಡನ್ ಸಿಟಿ ಅಂತೆಲ್ಲ ಕರೆಸಿಕೊಳ್ಳೋ ಬೆಂಗಳೂರಿಗೀಗ ಆಪತ್ತು ಎದುರಾಗಿದೆ. ಹೌದು ಇಂತದೊಂದು ಆತಂಕಕಾರಿ ವಿಷಯವನ್ನ ನಾಲ್ಕೈದು ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ವರದಿ ಸಮೇತ ಸಾಬೀತುಪಡಿಸಿದ್ದಾರೆ. 
ನದಿ ನೀರು ಬಳಕೆ ಮಾಡುವ ರಾಜ್ಯಗಳ ಪ್ರಮುಖ ಪಟ್ಟಣಗಳಾದ ಬೆಂಗಳೂರು, ಹೈದ್ರಾಬಾದ್, ಚೆನ್ನೈ, ಕೊಚ್ಚಿ ನದಿ ನೀರನ್ನ ವಿಜ್ಞಾನಿಗಳು ಪರೀಕ್ಷಿಸಿ ಅಧ್ಯಯನ ವರದಿ ನೀಡಿದ್ದಾರೆ.
ವರದಿಯಲ್ಲಿ ಆರ್ಸೆನಿಕ್ ಅಂಶ ಇರುವುದು ಧೃಡಪಟ್ಟಿದೆ. ಆರ್ಸೆನಿಕ್ ಅಂಶವನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ರೋಗ ಬರುವ ಸಾಧ್ಯತೆಗಳಿವೆ. ಅಲ್ಲದೇ ಈ ರೋಗ ಮಕ್ಕಳಿಗೆ ಬಹು ಬೇಗ ಬರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. 
ಇಲ್ಲಿನ ನೀರಿನಲ್ಲಿ ಆರ್ಸೆನಿಕ್ ಅಂಶ ಇರುವಿಕೆ ಪತ್ತೆಗಾಗಿ ರಾಜ್ಯದ ಮಣಿಪಾಲ್ ವಿವಿ, ಮದ್ರಾಸ್ ವಿವಿ ಹಾಗೂ ರಾಷ್ಟ್ರೀಯ ಕೃಷಿ ಹಾಗೂ ಆಹಾರ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಸಿ, ರಾಜಧಾನಿಯಲ್ಲಿ ಬಳಸುತ್ತಿರುವ ನೀರಿನಲ್ಲಿ ಆರ್ಸೆನಿಕ್ ಅಂಶ ಇರುವ ಬಗ್ಗೆ ಮಾಹಿತಿ ನೀಡಿದೆ.  
 
ಕೈಗಾರಿಕೆಯ ತ್ಯಾಜ್ಯ ನೀರೇ ಕಾರಣ.!
 
ನದಿಗಳ ಪಕ್ಕದಲ್ಲೆ ಇರುವ ಕೈಗಾರಿಕೆಗಳಿಂದ ತ್ಯಾಜ್ಯ ನೀರನ್ನ ನದಿಗೆ ಹರಿಸುತ್ತಿರುವುದರಿಂದ ಕೈಗಾರಿಕೆಗಳಲ್ಲಿನ ವಿಷಕಾರಿ ಲವಣಗಳು ನೀರಿನಲ್ಲಿ ಮಿಶ್ರಣವಾಗಿ ಜನತೆಯ ಹೊಟ್ಟೆ ಸೇರುತ್ತಿದೆ. ಆರ್ಸೆನಿಕ್ ಜೊತೆಗೆ ಪಾದರಸ, ಸೀಸ, ಕಾಡ್ಮಿಯಂ ಅನ್ನೋ ವಿಷಕಾರಿ ಲವಣಗಳು ನದಿಗೆ ಸೇರುತ್ತಿವೆ. ಇದರಿಂದ ನದಿಯಲ್ಲಿನ ಜೀವ ಸಂಕುಲ ಕೂಡಾ ನಶಿಸುತ್ತಿದೆ.  ದಕ್ಷಿಣ ಭಾರತದಲ್ಲಿ ಪ್ರಮುಖ ಕೈಗಾರಿಕೋದ್ಯಮಗಳು ನೆಲೆಗೊಂಡಿರುವುದೇ ಬೆಂಗಳೂರು ಚೆನ್ನೈ, ಹೈದ್ರಾಬಾದ್, ಕೊಚ್ಚಿನ್ ಗಳಲ್ಲಿ. ಅದರಲ್ಲೂ ಇವುಗಳ ತ್ಯಾಜ್ಯ ವಿಲೇವಾರಿಯಾಗುವುದು ನದಿಗಳೇ ಅನ್ನುವುದು ದುರಂತ.!
 
ನದಿಮೂಲ ಶುದ್ಧಿ ಬಗ್ಗೆ ಕೇರ್ ಇಲ್ಲ!
 
ವಿಪರ್ಯಾಸವೆಂದರೆ ನದಿಮೂಲಗಳ ಬಗ್ಗೆ ಆಡಳಿತಕ್ಕಾಗಲಿ, ಸರಕಾರಕ್ಕಾಗಲಿ ಜವಾಬ್ದಾರಿ ಇಲ್ಲ. ಇದರಿಂದ ನದಿ ಮೂಲಗಳು ಹಾಳಾಗುತ್ತಿವೆ ಎಂದು ಸಂಶೋಧನಾ ತಂಡ ಕಳವಳ ವ್ಯಕ್ತಪಡಿಸಿದೆ. ನಾಲ್ಕು ರಾಜ್ಯಗಳಲ್ಲಿ ಸಂಶೋಧನೆ ನಡೆಸಿದ ತಂಡ ನೀರಿನ ಮೂಲಗಳಾದ ಕೆರೆ, ಕೆನಾಲ್, ಮುಖ್ಯ ನದಿಗಳ 48 ಕಡೆ ನೀರನ್ನು ಪರೀಕ್ಷಿಸಿ 27 ನೀರಿನ ಸ್ಯಾಂಪಲ್ ಪಡೆದುಕೊಳ್ಳಲಾಗಿತ್ತು. ಅದರಲ್ಲೂ ಕಾವೇರಿ ನದಿ ಪಾತ್ರದಲ್ಲಿ ನೀರಿನಲ್ಲಿ ಮ್ಯಾಂಗನೀಸ್, ಐರನ್, ಕಾಪರ್, ಕಾಡ್ಮಿಯಮ್ ಅಂಶ ಹೆಚ್ಚಾಗಿರುವುದು ಕಂಡು ಬಂದಿದೆ. ಇಲ್ಲಿನ ಸ್ಯಾಂಪಲ್ಗಳ ಬಗ್ಗೆ ವಿಶ್ವ ಆರೋಗ್ಯ ಸಂಘಟನೆ ಗಮನಕ್ಕೂ ತರಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಜೊತೆಗೆ ಈ ಬಗ್ಗೆ ಶೀಘ್ರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇರಾನ್ ಮೇಲೆ ಅಮೆರಿಕೆ ಏರ್‌ಸ್ಟ್ರೈಕ್‌‌: ಡೊನಾಲ್ಡ್ ಟ್ರಂಪ್ ಗಂಡೆದೆಯನ್ನು ಕೊಂಡಾಡಿದ ಇಸ್ರೇಲ್ ಪ್ರಧಾನಿ

ಪಹಲ್ಗಾಮ್‌ ದಾಳಿ: ಪಾಕ್‌ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

ಸ್ಟೇಟ್ ಸ್ಪಾನ್ಸರ್ ಕರಪ್ಷನ್‌ಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರವೇ ಉತ್ತೇಜನ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ

ಸ್ನೇಹಿತರೊಂದಿಗೆ ತೋಟದ ಮನೆಗೆ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ಕೃಷಿಹೊಂಡದಲ್ಲಿ ಜಲಸಮಾಧಿ

ಏರ್‌ಸ್ಟ್ರೈಕ್‌ಗೆ ಕ್ಯಾರೇ ಎನ್ನದ ಇರಾನ್‌: ಇಸ್ರೇಲ್‌ ಮೇಲೆ ಮಿಸೈಲ್‌ಗಳ ಸುರಿಮಳೆ, ಗಗನಚುಂಬಿ ಕಟ್ಟಡಗಳಿಗೆ ಹಾನಿ

ಮುಂದಿನ ಸುದ್ದಿ
Show comments