Webdunia - Bharat's app for daily news and videos

Install App

ಬೆಂಗಳೂರು: ಹೊಟೇಲ್ ಟೆರೇಸ್‌ಗೆ ಕರೆದೊಯ್ದು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Sampriya
ಬುಧವಾರ, 26 ಫೆಬ್ರವರಿ 2025 (16:40 IST)
ಬೆಂಗಳೂರು: ಕಳೆದ ಗುರುವಾರ ಮಧ್ಯರಾತ್ರಿ ಕೋರಮಂಗಲದ ಹೋಟೆಲ್‌ನ ಟೆರೇಸ್‌ನಲ್ಲಿ 30 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರು ಹೋಟೆಲ್ ಕಾರ್ಮಿಕರನ್ನು ಬಂಧಿಸಲಾಗಿದೆ.

ಆರೋಪಿಗಳು ಕೋರಮಂಗಲದ ಅಜಿತ್, ಎಚ್‌ಎಸ್‌ಆರ್ ಲೇಔಟ್‌ನ ಶಿವು ಮತ್ತು ವಿಶ್ವಾಸ್ ಮತ್ತು ಆಡುಗೋಡಿಯ ಶಿಮೋಲ್ ಉತ್ತರಾಖಂಡದವರಾಗಿದ್ದು, ಉಳಿದವರು ಪಶ್ಚಿಮ ಬಂಗಾಳದವರು ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಮಹಿಳೆಯ ಪತಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಹೊಯ್ಸಳ ಗಸ್ತು ವಾಹನವೊಂದು ಮಹಿಳೆಯ ಆಗ್ನೇಯ ಬೆಂಗಳೂರಿನ ಮನೆಗೆ ನುಗ್ಗಿದೆ.

ಆಕೆಯ ದೂರಿನ ಮೇರೆಗೆ ಪೊಲೀಸರು ನಾಲ್ವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಶನಿವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಪ್ರಕಾರ, ಕೋರಮಂಗಲ ವಿ ಬ್ಲಾಕ್ ಬಳಿಯಲ್ಲಿ ನಾಲ್ವರು ಪುರುಷರು ಅಡ್ಡಗಟ್ಟಿದರು. ಅದರಲ್ಲಿ ಒಬ್ಬಾ ತನಗೆ ಪರಿಚಯವಿದ್ದ. ಆತನ ಮೂವರು ಸ್ನೇಹಿತರ ಜತೆಗೆ ಊಟಕ್ಕೆ ಕರೆದರು. ನಾನು ಒಪ್ಪಿದಾಗ, ಅವರು ನನ್ನನ್ನು ಹತ್ತಿರದ ಹೋಟೆಲ್‌ನ ಟೆರೇಸ್‌ಗೆ ಕರೆದೊಯ್ದರು. ಈ ವೇಳೆ ಅವರು ನನಗೆ ಬಲವಂತವಾಗಿ ಮದ್ಯ ಸೇವಿಸಿ, ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಹೇಳಿದರು.

ಬೆಳಗ್ಗೆ 7 ಗಂಟೆ ಸುಮಾರಿಗೆ ಆಕೆಯನ್ನು ಮನೆಗೆ ಹೋಗುವಂತೆ ಹೇಳಿದರು. ಅವರೇ ಆಟೋವನ್ನು ಬುಕ್‌ ಮಾಡಿ, ಮನೆಗೆ ಹೋಗುವಂತೆ ಹೇಳಿದರು.  ಮನೆಗೆ ಬಂದ್ಮೇಲೆ ಗಂಡನಿಗೆ ನಡೆದ ಘಟನೆ ಬಗ್ಗೆ ವಿವರಿಸಿದ್ದಾಳೆ.

ಮಹಿಳೆ ದೆಹಲಿ ಮೂಲದವರಾಗಿದ್ದು, ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ದಂಪತಿಗೆ ನಾಲ್ಕು ಮಕ್ಕಳಿದ್ದಾರೆ; ಮೂವರು ದೆಹಲಿಯಲ್ಲಿದ್ದರೆ, ಕಿರಿಯ ಮಗು ಬೆಂಗಳೂರಿನಲ್ಲಿದೆ. ಪತಿ ಖಾಸಗಿ ಸೆಲ್ಯುಲಾರ್ ಸಂಸ್ಥೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರೆ, ಮಹಿಳೆ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ