Select Your Language

Notifications

webdunia
webdunia
webdunia
webdunia

ಹೆಜ್ಜೇನು ದಾಳಿ: ಶವವನ್ನು ಬಿಟ್ಟು ಕಾಲ್ಕಿತ್ತ ಸಂಬಂಧಿಕರು

ಹೆಜ್ಜೇನು ದಾಳಿ: ಶವವನ್ನು ಬಿಟ್ಟು ಕಾಲ್ಕಿತ್ತ ಸಂಬಂಧಿಕರು
ಚಿಕ್ಕಬಳ್ಳಾಪುರ , ಭಾನುವಾರ, 21 ಡಿಸೆಂಬರ್ 2014 (14:35 IST)
ಶವಸಂಸ್ಕಾರದ ವೇಳೆ ಹೆಜ್ಜೇನು ದಾಳಿ ನಡೆಸಿದ ಘಟನೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನಲ್ಲಿ ಸಂಭವಿಸಿದೆ. ಮೃತ ವ್ಯಕ್ತಿ ಶಿವಕುಮಾರ್ ಎಂಬವರ ಶವಸಂಸ್ಕಾರಕ್ಕೆ ಸಂಬಂಧಿಕರು ತೆರಳಿದ್ದಾಗ ಹೆಜ್ಜೇನು ದಾಳಿಯಿಂದ ಕಂಗಾಲಾಗಿ ನಿಂತ ಜಾಗದಲ್ಲೇ ಶವವನ್ನು ಬಿಟ್ಟು ಓಡಿಹೋಗಿದ್ದಾರೆ.  

ಮರದ ಮೇಲಿದ್ದ ಗೂಡಿನಲ್ಲಿದ್ದ ಹೆಜ್ಜೇನುಗಳು ತಮಟೆ ಸದ್ದು ಮತ್ತು ಹೊಗೆಯಿಂದ ಕೆರಳಿ ಜನರಿಗೆ ಮನಬಂದಂತೆ ಕಚ್ಚಿದವು. ತೀವ್ರವಾಗಿ ಗಾಯಗೊಂಡ ಕೃಷ್ಣಮೂರ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ

. ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಗ್ರಾಮಸ್ಥರು ಶವ ಬಿಟ್ಟು ಓಡಿಹೋಗಿದ್ದರಿಂದ ಶವ ಅನಾಥವಾಗಿ ಶವಸಂಸ್ಕಾರಕ್ಕಾಗಿ ಕಾಯುತ್ತಾ ಬಿದ್ದಿದೆ. ಆದರೆ ಮತ್ತೆ ಹೆಜ್ಜೇನು ದಾಳಿಮಾಡಬಹುದೆಂಬ ಭೀತಿಯಿಂದ ಯಾರೂ ಶವದ ಬಳಿ ಸುಳಿಯುತ್ತಿಲ್ಲ. 
 

Share this Story:

Follow Webdunia kannada