Webdunia - Bharat's app for daily news and videos

Install App

ಗಂಡನ ಅನುಮಾನಕ್ಕೆ ನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

Webdunia
ಶನಿವಾರ, 29 ಅಕ್ಟೋಬರ್ 2016 (17:00 IST)
ಗಂಡನ ಅನುಮಾನಾಸ್ಪದ ನಡೆಗೆ ಮನನೊಂದ ಪತ್ನಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ನಗರದ ಬೈರವೇಶ್ವರ ನಗರದಲ್ಲಿ ಇಂದು ಮುಂಜಾನೆ ನಡೆದಿದೆ.
 
ಕಾವ್ಯಾ(26) ಎಂಬಾಕೆಯೇ ನೇಣಿಗೆ ಶರಣಾದ ಮಹಿಳೆಯಾಗಿದ್ದಾಳೆ. ಯಾರ ಹತ್ತಿರ ಮಾತನಾಡಿದರೂ, ಫೇಸ್ ಬುಕ್ ನೋಡಿದರೂ ಹಾಗೂ ಮೊಬೈಲ್ ನಲ್ಲಿ ಮಾತನಾಡಿದರೂ ಪತಿ ಮಹಾಶಯ ಮಾರುತಿ ಪ್ರಸಾದ(35) ತೀರಾ ಅನುಮಾನ ಪಡುತ್ತಿದ್ದನು. ಮದುವೆಯಾದ ಒಂದು ವರ್ಷ ಇಬ್ಬರೂ ಚೆನ್ನಾಗಿಯೇ ಇದ್ದರು. ನಂತರದ ದಿನಗಳಲ್ಲಿ ಅನುಮಾನದ ಪಿಶಾಚಿ ಗಂಡನನ್ನು ಪ್ರವೇಶಿಸಿದೆ. ಅಂದಿನಿಂದ ಹೆಂಡತಿಯನ್ನ ಅನುಮಾನದಿಂದ ನೋಡಲು ಪ್ರಾರಂಭಿಸಿದ್ದಾನೆ. ಯಾರ ಜೊತೆಯೂ ಮಾತನಾಡ ಬೇಡ, ಫೇಸ್‌ ಬುಕ್ ನೋಡಬೇಡ, ಮೊಬೈಲ್‌ನಲ್ಲಿ ಮಾತನಾಡಬೇಡ, ಕೆಲಸಕ್ಕೆ ಹೋಗಬೇಡ ಎಂದು ಪ್ರತಿ ದಿನ ಕಿರುಕುಳ ನೀಡುತ್ತಿದ್ದನಂತೆ. ಇದರಿಂದ ಮನನೊಂದ ಕಾವ್ಯ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.
 
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕಾವ್ಯಾಳ ಪೋಷಕರು, ಅಳಿಯ ಪ್ರಸಾದ್ ಕಿರುಕುಳ ನೀಡುತ್ತಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಾರುತಿ ಪ್ರಸಾದ್ ನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. 
 
ಡೆತ್ ನೋಟ್ ಲ್ಲಿ ಏನಿದೆ?
'ಅಪ್ಪ, ಅಮ್ಮ ನನ್ನನ್ನ ಕ್ಷಮಿಸಿ, ನಾನು ಯಾರ ಹತ್ತಿರ ಮಾತನಾಡಿದರೂ, ಫೇಸ್ ಬುಕ್ ನೋಡಿದರೂ, ಮೊಬೈಲ್‌ನಲ್ಲಿ ಮಾತನಾಡಿದರು ಅನುಮಾನದಿಂದ ನೋಡುವ ನನ್ನ ಗಂಡನ ವರ್ತನೆಯಿಂದ ಬೇಸರಗೊಂಡು ಬಾರದ ಲೋಕಕ್ಕೆ ಹೋಗುತ್ತಿದ್ದೇನೆ. ಮಗುವನ್ನ ಚೆನ್ನಾಗಿ ನೋಡಿಕೊಳ್ಳಿ, ನನ್ನನ್ನು ಕ್ಷಮಿಸಿ ಅಪ್ಪ- ಅಮ್ಮ' ಎಂದು ಡೆತ್ ನೋಟ್ ಬರೆದಿಟ್ಟಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಭಿನ್ನರ ಬಗ್ಗೆ ಬಿಎಸ್ ಯಡಿಯೂರಪ್ಪ ಸ್ಪೋಟಕ ಹೇಳಿಕೆ

ಇದು ಸೇವೆಗಾಗಿ ಬಂದ ಕಾಂಗ್ರೆಸ್ ಅಲ್ಲ, ವ್ಯಾಪಾರಕ್ಕಾಗಿ ಬಂದಿದ್ದು: ಛಲವಾದಿ ನಾರಾಯಣಸ್ವಾಮಿ

ಸಾಲಗಾರನ ಮಗಳನ್ನು ಕರೆದೊಯ್ದ ಪ್ರಕರಣ: ಆರೋಪಿ ಅರೆಸ್ಟ್‌

ನನ್ನ ಶೂ ನೆಕ್ಕಲು ಸಹ ಅರ್ಹನಲ್ಲ: ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ದೂರು ಕೊಟ್ಟ ಇಂಡಿಗೋ ಸಿಬ್ಬಂದಿ

ಜಮ್ಮುನಲ್ಲಿ ಲ್ಯಾಂಡಿಂಗ್‌ ಆಗಬೇಕಿದ್ದ ಏರ್‌ ಇಂಡಿಯಾ ವಿಮಾನ ದೆಹಲಿಗೆ ವಾಪಸ್‌: ಕಾರಣ ನಿಗೂಢ

ಮುಂದಿನ ಸುದ್ದಿ
Show comments