ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಕಾರ್ಪೋರೇಟರ್ಗಳು ಕಾಂಗ್ರೆಸ್ ಕಾರ್ಪೋರೇಟರ್ಗಳ ಮೇಲೆ ಹಲ್ಲೆ ನಡೆಸಿದ್ದು, ಬಿಬಿಎಂಪಿ ಪಾಲಿಗೆ ಇಂದು ಕರಾಳ ದಿನವಾಗಿದೆ ಎಂದು ಮೇಯರ್ ಬಿ.ಎನ್. ಮಂಜುನಾಥ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಾರ್ಪೋರೇಟರ್ಗಳು ಕಾರ್ಪೋರೇಟರ್ಗಳಂತೆ ವರ್ತಿಸದೆ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಇಂದಿನ ಕೋಲಾಹಲಕ್ಕೆ ಬಿಜೆಪಿ ಸದಸ್ಯರೇ ನೇರ ಹೊಣೆ ಎಂದು ಕಿಡಿಕಾರಿದ್ದಾರೆ.
ಕೌನ್ಸಿಲ್ ಸಭೆಯಲ್ಲಿ ಡ್ರಾಮಾ ಮಾಡಿರುವ ಬಿಜೆಪಿ ಸದಸ್ಯರು, ತಮ್ಮ ನಾಟಕೀಯ ವರ್ತನೆಗಳನ್ನು ಮುಂದುವರಿಸಿರುವುದು ನಾಚಿಕೆಗೇಡಿನ ಸಂಗತಿ. ನಾವು ಕೂಡಾ ವಿಪಕ್ಷದಲ್ಲಿದ್ದಾಗ ಜವಾಬ್ದಾರಿಯಿಂದ ವರ್ತಿಸಿದ್ದೇವೆ. ಬಿಜೆಪಿಯವರಂತೆ ಹೇಡಿತನದಿಂದ ವರ್ತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಬಿಜೆಪಿ ಸದಸ್ಯರು ಇದೇ ರೀತಿ ವರ್ತನೆ ಮುಂದುವರಿಸಿದಲ್ಲಿ ಸಭೆ ನಡೆಸುವುದು ಕಷ್ಟವಾಗಲಿದೆ. ಬಿಜೆಪಿ ಕಾರ್ಪೋರೇಟರ್ಗಳ ವರ್ತನೆ ಖಂಡಿಸುತ್ತೇನೆ. ಕಾಂಗ್ರೆಸ್ ಪಕ್ಷದ ಸದಸ್ಯರು ಬಿಜೆಪಿ ಸದಸ್ಯರಿಗೆ ಸರಿಯಾದ ಸಮಯದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗುಡುಗಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.