Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಚುನಾವಣೆ ಸೋಲಿನ ವರದಿ ಹೈಕಮಾಂಡ್‌ಗೆ ರವಾನೆ: ಜಿ.ಪರಮೇಶ್ವರ್

ಬಿಬಿಎಂಪಿ ಚುನಾವಣೆ ಸೋಲಿನ ವರದಿ ಹೈಕಮಾಂಡ್‌ಗೆ ರವಾನೆ: ಜಿ.ಪರಮೇಶ್ವರ್
ಬೆಂಗಳೂರು , ಬುಧವಾರ, 26 ಆಗಸ್ಟ್ 2015 (19:21 IST)
ಬಿಬಿಎಂಪಿ ಚುನಾವಣೆ ಸೋಲಿನ ವರದಿಯನ್ನು ಪಕ್ಷದ ಹೈಕಮಾಂಡ್‌‍ಗೆ ಸ್ವಯಂ ಪ್ರೇರಣೆಯಿಂದ ಕಳುಹಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
 
ಬಿಬಿಎಂಪಿ ಚುನಾವಣೆಗಾಗಿ ಸಿದ್ದತೆ ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿರಲಿಲ್ಲ. ಆದರೂ ಯಾಕೆ ಸೋಲಾಯಿತು ಎನ್ನು ಬಗ್ಗೆ ಆತ್ಮವಿಮರ್ಶೆ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಸಚಿವರ ಕಾರ್ಯ ವೈಖರಿಯ ವಿವರಗಳನ್ನು ಹೈಕಮಾಂಡ್‌ಗೆ ರವಾನಿಸಿದ ವರದಿಯಲ್ಲಿ ಅಡಕವಾಗಿದೆ. 
 
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಿರಿಯ ಸಚಿವರೊಂದಿಗೆ ಸೋಲಿನ ಬಗ್ಗೆ ಚಿಂತನೆ ನಡೆಸಿ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
 
ಪಕ್ಷದಲ್ಲಿ ಸಿಎಂ ಬದಲಾವಣೆ ಮಾಡುವ ಚರ್ಚೆಯಿಲ್ಲ. ಸೋಲಿಗೆ ಕಾರಣವಾದ ಅಂಶಗಳ ವಿವರಗಳನ್ನು ಮಾತ್ರ ಕಳುಹಿಸಲಾಗುತ್ತಿದೆ ಎಂದು ಜಿ. ಪರಮೇಶ್ವರ್ ಹೇಳಿದ್ದಾರೆ.

Share this Story:

Follow Webdunia kannada