ಬಿಬಿಎಂಪಿಯನ್ನು ವಿಭಜಿಸಲು ಹೊರಟಿರುವ ಸರಕಾರದ ನಡೆಯ ವಿರುದ್ಧ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಬಿಎಂಪಿ ಮೂರು ಭಾಗವಾದ್ರೆ ಸಮಸ್ಯೆ ಪರಿಹಾರವಾಗುತ್ತಾ? ಎಂದು ಗುಡುಗಿದ್ದಾರೆ.
ನಗರದ ಕಸದ ಡಂಪಿಂಗ್ನನ್ನು ಯಾವ ಪಾಲಿಕೆಯಿಂದ ಮಾಡ್ತೀರಿ? ಬಿಬಿಎಂಪಿ ಮೂರು ಭಾಗಗಳಾದಲ್ಲಿ ಪರಸ್ಪರ ಸಹಕಾರ ದೊರೆಯುವುದಿಲ್ಲ. ಇದರಿಂದ ಮತ್ತಷ್ಟು ಸಮಸ್ಯೆಗಳು ಉದ್ಭವವಾಗುತ್ತವೆ ಎಂದು ತಿರುಗೇಟು ನೀಡಿದರು.
ಬಿಬಿಎಂಪಿ ಚುನಾವಣೆ ದಿನಾಂಕ ಘೋಷಣೆಯ ಬಗ್ಗೆ ಚುನಾವಣೆ ಆಯೋಗ ಸರಕಾರಕ್ಕೆ ಹಲವು ಬಾರಿ ಪತ್ರ ಬರೆದಿದೆ. ಆದರೆ, ಸರಕಾರಕ್ಕೆ ಚುನಾವಣೆ ನಡೆಸುವುದು ಬೇಡವಾಗಿದ್ದರಿಂದ ವಿಭಜನೆಯ ಸಂಚು ರೂಪಿಸಿದೆ ಎಂದು ವಾಗ್ದಾಳಿ ನಡೆಸಿದರು.
ಸರಕಾರ ಮುಂದಾಲೋಚನೆಯಿಲ್ಲದೇ ತುರ್ತಾಗಿ ಬಿಬಿಎಂಪಿಯನ್ನು ವಿಭಜಿಸುವ ನಿರ್ಧಾರ ತೆಗೆದುಕೊಂಡಿದೆ ಸರಕಾರದ ಕ್ರಮದಿಂದ ಮುಂದೆ ತೊಂದರೆಯಾಗಲಿದೆ ಎಂದರು.
ಬಿಬಿಎಂಪಿಯಂತೆ ಬಿಎಂಟಿಸಿ ಕೂಡಾ ವಿಭಜಿಸ್ತೀರಾ?ಬಿಬಿಎಂಪಿಯಂತೆ ಇತರ ಸಂಸ್ಥೆಗಳ ಮೇಲೆ ಕೂಡಾ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರವನ್ನು ಪ್ರಶ್ನಿಸಿದರು.