Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಮುಗಿಯದ ರಾದ್ದಾಂತ: ಮುಂದುವರಿದ ಬಿಜೆಪಿ, ಕಾಂಗ್ರೆಸ್ ತಿಕ್ಕಾಟ

ಬಿಬಿಎಂಪಿ ಮುಗಿಯದ ರಾದ್ದಾಂತ: ಮುಂದುವರಿದ ಬಿಜೆಪಿ, ಕಾಂಗ್ರೆಸ್ ತಿಕ್ಕಾಟ
ಬೆಂಗಳೂರು , ಶನಿವಾರ, 30 ಏಪ್ರಿಲ್ 2016 (15:55 IST)
ಬಿಬಿಎಂಪಿ ಇತಿಹಾಸದಲ್ಲಿ ನಿನ್ನೆ ಕರಾಳದಿನವಾಗಿತ್ತು ಎಂದು ಬಿಜೆಪಿ ಮುಖಂಡರ ಆರೋಪಗಳಿಗೆ ತಿರುಗೇಟು ನೀಡಿದ ಬಿಬಿಎಂಪಿ ಮೇಯರ್, ಮಂಜುನಾಥ್ ರೆಡ್ಡಿ, ಬೆಂಗಳೂರು ಜನತೆ ಮುಂಬರುವ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
 
ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಲ್ಲದೇ ಗೂಂಡಾಗಿರಿ ಪ್ರವೃತ್ತಿ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. 
 
ಯಾವುದೇ ಸಂದರ್ಭದಲ್ಲಿ ಬಿಜೆಪಿಯಿಂದ ಥರ್ಡ್ ಕ್ಲಾಸ್ ರಾಜಕೀಯ ಎನ್ನುವ ಪದ ನಾನು ಬಳಸಿಲ್ಲ ನಾನು ಕೂಡಾ ಹಿಂದೆ ವಿಪಕ್ಷ ನಾಯಕನಾಗಿ ಕಾರ್ಯನಿರ್ವಹಿಸಿದ್ದೇನೆ. ನನಗೂ ಪ್ರಜಾಪ್ರಭುತ್ವದ ಮೌಲ್ಯಗಳು ಗೊತ್ತಿವೆ. ಬಿಜೆಪಿಯವರಿಂದ ಪಾಠ ಕಲಿಯಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ.
 
ಕಾಂಗ್ರೆಸ್ ಪಕ್ಷದ ಸದಸ್ಯರು ಬಿಜೆಪಿ ಮಹಿಳಾ ಸದಸ್ಯರ ವಿರುದ್ಧ ಅಸಭ್ಯ ಭಾಷೆ ಬಳಕೆ ಮಾಡಿದ್ದಲ್ಲದೇ ಗೂಂಡಾಗಿರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಮಹಿಳೆ ಎನ್ನುವುದನ್ನು ಮೇಯರ್ ಮಂಜುನಾಥ್ ರೆಡ್ಡಿ ಮರೆಯಬಾರದು ಎಂದು ಬಿಜೆಪಿ ತಿರುಗೇಟು ನೀಡಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷ ಸಿಐಡಿ ಡಿಐಜಿ ಸೋನಿಯಾ ನಾರಂಗ್ ವರ್ಗಾವಣೆ