Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಮೈತ್ರಿ ಕುರಿತಂತೆ ಬಿಜೆಪಿ -ಜೆಡಿಎಸ್ ನಾಯಕರ ಸಮಾಲೋಚನೆ

ಬಿಬಿಎಂಪಿ ಮೈತ್ರಿ ಕುರಿತಂತೆ ಬಿಜೆಪಿ -ಜೆಡಿಎಸ್ ನಾಯಕರ ಸಮಾಲೋಚನೆ
ಬೆಂಗಳೂರು , ಶನಿವಾರ, 29 ಆಗಸ್ಟ್ 2015 (14:04 IST)
ಬಿಬಿಎಂಪಿ ಅಧಿಕಾರದ ಕಸರತ್ತು ರಾಜಕೀಯ ಪಕ್ಷಗಳಲ್ಲಿ ಕೋಲಾಹಲ ಸೃಷ್ಟಿಸಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ವರದಿಗಳ ನಡುವೆ ಇದೀಗ ಬಿಜೆಪಿ-ಜೆಡಿಎಸ್ ನಾಯಕರು ಸಮಾಲೋಚನೆ ನಡೆಸುತ್ತಿರುವುದು ಮತ್ತೊಂದು ಬೆಳವಣಿಗೆಯಾಗಿದೆ.
 
ಜಯನಗರದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಸಭೆ ಬಿಜೆಪಿ ನಾಯಕರಾದ ಅಶೋಕ್, ಸೋಮಣ್ಣಾ ಮತ್ತು ಜೆಡಿಎಸ್‌ನ ಚೆಲುವರಾಯ ಸ್ವಾಮಿ,ಕೆ.ಗೋಪಾಲಯ್ಯ ಸ್ವಾಮಿ, ಪುಟ್ಟಣ್ಣಯ್ಯ ಮತ್ತು ಪಕ್ಷೇತರ ಶಾಸಕ ಮಲ್ಲಿಕಾರ್ಜುನಯ್ಯ ಸಭೆ ಸೇರಿ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸುಮಾರು ಅರ್ಧ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಉಭಯ ಪಕ್ಷಗಳ ಮೈತ್ರಿ ಕುರಿತಂತೆ ಚರ್ಚಿಸಲಾಗಿದೆ. ಕಾಂಗ್ರೆಸ್ ವಶದಲ್ಲಿರುವ ಪಕ್ಷೇತರರನ್ನು ಕೂಡಾ ಸಂಪರ್ಕಿಸಿ ಬಿಜೆಪಿಯತ್ತ ಕರೆತರುವ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗಿದೆ.
 
 ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಬಿಎಂಪಿ ಪಾಲಿಕೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿಯಿಲ್ಲ ಎಂದು ಹೇಳಿಕೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕೋಲಾಹಲ ಉಂಟು ಮಾಡಿದೆ.  

Share this Story:

Follow Webdunia kannada