ವಕ್ಫ್ ಆಸ್ತಿಯನ್ನೂ ಕಾಂಗ್ರೆಸ್ ನವರು ಗುಳುಂ ಮಾಡ್ಯಾರಾ: ಬಸನಗೌಡ ಪಾಟೀಲ್ ಯತ್ನಾಳ್

Krishnaveni K
ಮಂಗಳವಾರ, 15 ಅಕ್ಟೋಬರ್ 2024 (11:41 IST)
ವಿಜಯಪುರ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಕೆಐಡಿಬಿಐ ಆಸ್ತಿ ಮರಳಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನವರು ವಕ್ಫ್ ಆಸ್ತಿಯನ್ನೂ ಗುಳುಂ ಮಾಡಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಮಲ್ಲಿಕಾರ್ಜುನ ಖರ್ಗೆಯವರು ಕೇವಲ ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೇ ಹಿರಿಯ ನಾಯಕರಿದ್ದಾರೆ. ಆದರೆ ಅವರ ಮಾತುಗಳನ್ನು ಕೇಳಿದರೆ ಬಾಲಿಶ ಅನಿಸ್ತದೆ. ಬಿಜೆಪಿ ಭಯೋತ್ಪಾದಕರ ಪಕ್ಷ ಅಂತಾರೆ, ಹಾಗಿದ್ದರೆ ಕಾಂಗ್ರೆಸ್ ಏನು ಜಿಹಾದಿಗಳ ಪಕ್ಷವಾ ಎಂದು ಪ್ರಶ್ನೆ ಮಾಡಿದ್ದಾರೆ.

ಖರ್ಗೆ ಸಾಹೇಬ್ರು ತಪ್ಪು ಮಾಡಿಲ್ಲ ಅಂದರೆ ಭೂಮಿ ಯಾಕೆ ಹಿಂತಿರುಗಿಸಬೇಕಿತ್ತು? ಈಗ ನನ್ನ ಬಳಿ ಸ್ವಲ್ಪ ಆಸ್ತಿ ಇದೆ ಅಂತಂದ್ರೆ ಅದು ನಾನು ನ್ಯಾಯಯುತವಾಗಿ ಖರೀದಿ ಮಾಡಿದ್ದು ಎಂದರೆ ನಾನ್ಯಾಕೆ ವಾಪಸ್ ಮಾಡ್ತೀನಿ? ತಪ್ಪು ಮಾಡಿದ್ದಕ್ಕೇ ಈಗ ಸೈಟು ವಾಪಸ್ ಮಾಡಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.

ಕೇವಲ, ಸರ್ಕಾರೀ ಭೂಮಿ ಮಾತ್ರವಲ್ಲ, ವಕ್ಫ್ ಬೋರ್ಡ್ ಆಸ್ತಿಯನ್ನೂ ಹಲವು ಕಾಂಗ್ರೆಸ್ ನಾಯಕರು ಗುಳುಂ ಮಾಡಿದ್ದಾರೆ. ಸಾವಿರಾರು ಎಕರೆ ವಕ್ಫ್ ಬೋರ್ಡ್ ಹೆಸರಿನಲ್ಲೂ ಕಾಂಗ್ರೆಸ್ ನಾಯಕರು ಭೂಕಬಳಿಕೆ ಮಾಡಿದ್ದಾರೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿರಾ ಗಾಂಧಿ ಪುಸ್ತಕ 100 ರೂ ಕೊಟ್ಟು ತಗೊಂಡು ಹೋಗಿ: ಡಿಕೆ ಶಿವಕುಮಾರ್ ತಾಕೀತು

ಭ್ರಷ್ಟ, ಜನ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ

Viral video: ಅಬ್ಬಬ್ಬಾ ಶಕ್ತಿಮಾನ್ ನಾಯಿಯಿದು.. ಕಾರಿನ ಸ್ಥಿತಿ ಏನು ಮಾಡಿತು ನೋಡಿ

ಅಜ್ಜಿಯ ಧೈರ್ಯವೇ ನನ್ನ ಶಕ್ತಿ: ಬಿಹಾರ ಚುನಾವಣೆ ನಂತರ ಫಸ್ಟ್ ಟೈಂ ಹೊರಗೆ ಬಂದ ರಾಹುಲ್ ಗಾಂಧಿ

ಮೋಸ ಮಾಡಿ ಗೆದ್ದ ಪ್ರಧಾನಿಗಳನ್ನು ನಾನು ಇದುವರೆಗೂ ನೋಡಿಲ್ಲ: ಮೋದಿಗೆ ಸಂತೋಷ್ ಲಾಡ್ ಟಾಂಗ್

ಮುಂದಿನ ಸುದ್ದಿ
Show comments