Select Your Language

Notifications

webdunia
webdunia
webdunia
webdunia

ದೇವರ ಪೂಜೆ ಮಾಡಿ ನೇಣಿಗೆ ಶರಣಾದ ಬ್ಯಾಂಕ್ ವ್ಯವಸ್ಥಾಪಕ

ದೇವರ ಪೂಜೆ ಮಾಡಿ ನೇಣಿಗೆ ಶರಣಾದ ಬ್ಯಾಂಕ್ ವ್ಯವಸ್ಥಾಪಕ
ಬೆಂಗಳೂರು , ಗುರುವಾರ, 28 ಏಪ್ರಿಲ್ 2016 (09:39 IST)
ಕೆನರಾ ಬ್ಯಾಂಕ್‌  ಜೆ.ಪಿ. ನಗರ ಶಾಖೆಯಲ್ಲಿ  ವ್ಯವಸ್ಥಾಪಕರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯನಗರ 9ನೇ ಬ್ಲಾಕ್ ರಾಗಿಗುಡ್ಡದ ಶಾಂತಿ ಪಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಸುಧಿಂದ್ರ ಮೂರ್ತಿ (57) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. 
 
ಮಂಗಳವಾರ ರಾತ್ರಿ 1 ಗಂಟೆಗೆ ಪತಿ ಸುಧೀಂದ್ರ ದೇವರ ಪೂಜೆ ಮಾಡುತ್ತಿದ್ದುದನ್ನು ನೋಡಿ ದಂಗಾದ ಪತ್ನಿ ಪ್ರಶ್ನಿಸಿದಾಗ ನಿದ್ದೆ ಬರುತ್ತಿಲ್ಲ. ಅದಕ್ಕೆ ಪೂಜೆ ಮಾಡುತ್ತಿದ್ದೇನೆ. ನೀವು ಹೋಗಿ ಮಲಗಿ ಎಂದಿದ್ದಾರೆ. ಬೆಳಿಗ್ಗೆ ತಾಯಿ ಮಗಳು ಎದ್ದು ನೋಡಿದಾಗ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
 
ಬ್ಯಾಂಕ್‌ನ ಮೇಲಾಧಿಕಾರಿಗಳ ಕಿರುಕುಳವೇ ಘಟನೆಗೆ ಕಾರಣವಿರಬಹುದೆಂದು ಸುಧಿಂದ್ರ ಸ್ನೇಹಿತರು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಸ್ಥಳದಲ್ಲಿ ಸಿಕ್ಕಿರುವ ಡೆತ್ ನೋಟ್ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. 
 
ತಿಲಕ್‌ನಗರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.  

Share this Story:

Follow Webdunia kannada

ಮುಂದಿನ ಸುದ್ದಿ

ದುಪ್ಪಟ್ಟು ದರ ಕೇಳಿದ್ದನ್ನು ಪ್ರಶ್ನಿಸಿದ್ದಕ್ಕೆ ಅಸಭ್ಯ ವರ್ತನೆ