Select Your Language

Notifications

webdunia
webdunia
webdunia
webdunia

ಹುತಾತ್ಮ ಬಂಡೆ ಪತ್ನಿ ಮಲ್ಲಮ್ಮಗೆ ಅನಾರೋಗ್ಯ

ಹುತಾತ್ಮ ಬಂಡೆ ಪತ್ನಿ ಮಲ್ಲಮ್ಮಗೆ ಅನಾರೋಗ್ಯ
ಬೆಂಗಳೂರು , ಶುಕ್ರವಾರ, 19 ಫೆಬ್ರವರಿ 2016 (16:42 IST)
ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ್ ಬಂಡೆ ಪತ್ಮಿ ಮಲ್ಲಮ್ಮ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಸರಕಾರ ನೆರವು ನೀಡಬೇಕು ಎಂದು ಮಲ್ಲಿಕಾರ್ಜುನ್ ಬಂಡೆ ತಂದೆ ಕರಿಬಸಪ್ಪ ಬಂಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.
 
ಸೊಸೆ ಮಲ್ಲಮ್ಮ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಬೇಕು ಎಂದು ಮೌರ್ಯ ಸರ್ಕಲ್ ಬಳಿ ಧರಣಿ ನಡೆಸಿದ್ದ ಕರಿಬಸಪ್ಪ ಬಂಡೆ, ಮುಖ್ಯಮಂತ್ರಿಯನ್ನು ಭೇಟಿಯಾಗದೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.
 
ನಂತರ ಪೊಲೀಸರು ಕರಿಬಸಪ್ಪ ಅವರನ್ನು ಮುಖ್ಯಮಂತ್ರಿಯವರ ಅಧಿಕೃತ ನಿವಾಸಕ್ಕೆ ಕರೆದುಕೊಂಡು ಹೋಗಿ ಮನವಿ ಸಲ್ಲಿಸಲು ನೆರವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕರಿಬಸಪ್ಪನವರಿಗೆ ಸರಕಾರದಿಂದ ನೆರವು ನೀಡುವ ಭರವಸೆ ದೊರೆತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
 
ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಮಲ್ಲಿಕಾರ್ಜುನ್ ಬಂಡೆ ಕರ್ತವ್ಯನಿರ್ವಹಣೆ ಸಂದರ್ಭದಲ್ಲಿ ಅಪರಾಧಿಯೊಬ್ಬನ ಗುಂಡಿಗೆ ಬಲಿಯಾಗಿರುವುದನ್ನು ಸ್ಮರಿಸಬಹುದು.

Share this Story:

Follow Webdunia kannada