Webdunia - Bharat's app for daily news and videos

Install App

ಬಾಲಕನಿಗೆ ಬಾಸುಂಡೆ : ವಾರ್ಡನ್‌ಗಳ ಪೈಶಾಚಿಕ ಕೃತ್ಯ

Webdunia
ಶುಕ್ರವಾರ, 22 ಆಗಸ್ಟ್ 2014 (16:35 IST)
ಡೇರಿಸರ್ಕಲ್ ಬಳಿಯ ಸರ್ಕಾರಿ ರಿಮಾಂಡ್ ಹೋಮ್‌ನಲ್ಲಿ   13 ವರ್ಷದ ಬಾಲಕನ ಮೇಲೆ ವಾರ್ಡನ್‌ಗಳು ಸಿಕ್ಕಾಪಟ್ಟೆ ಥಳಿಸಿ ಯಮಹಿಂಸೆ ನೀಡಿದ ಘಟನೆ ವರದಿಯಾಗಿದೆ. ಟಾಯ್ಲೆಟ್ ಕ್ಲೀನ್ ಮಾಡಲು ಬಾಲಕ  ನಿರಾಕರಿಸಿದ್ದರಿಂದ ಪಿವಿಸಿ ಪೈಪ್‌ನಿಂದ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ತಾಯಿ ಮನೆಗೆ ಕರೆತಂದಾಗ ಬಾಲಕ ಏಕಾಏಕಿ ಕುಸಿದುಬಿದ್ದ.

ವಾರ್ಡನ್ ರಮೇಶ್, ಸಂತೋಷ್ ಮತ್ತು ನರಸಿಂಹ ಎಂಬುವರು ಸೇರಿ ಪಿವಿಸಿ ಪೈಪ್‌ನಿಂದ 6ನೇ ತರಗತಿ ವಿದ್ಯಾರ್ಥಿ ಮೇಲೆ ಸಿಕ್ಕಾಪಟ್ಟೆ ಹೊಡೆದರು. ಯಶವಂತಪುರದ ಆದರ್ಶ ಶಾಲೆಯ ವಿದ್ಯಾರ್ಥಿಯಾಗಿದ್ದ ಬಾಲಕ ಶಾಲೆ ಮುಗಿದ ಮೇಲೆ ಚಾಮರಾಜಪೇಟೆ ಬಳಿ ದಾರಿತಪ್ಪಿ ಸುತ್ತಾಡುತ್ತಿದ್ದ ಬಾಲಕನನ್ನು ಹಿಡಿದು ಕಳೆದುಹೋಗಿದ್ದಾನೆಂದು ಹೇಳಿ ಕಾರಿನಲ್ಲಿ  ರಿಮಾಂಡ್‌ಹೋಂಗೆ  ಕರೆದುಕೊಂಡು ಹೋದ ವಾರ್ಡನ್‌‌‌ಗಳು  ಟಾಯ್ಲೆಟ್ ಕ್ಲೀನ್ ಮಾಡುವಂತೆ ಬಾಲಕನಿಗೆ ಸೂಚಿಸಿದರು.

ಬಾಲಕ ನಿರಾಕರಿಸಿದಾಗ ಅವನಿಗೆ ಮೂವರೂ ಪಿವಿಸಿ ಪೈಪ್‌ನಿಂದ ಮೈಮೇಲೆ ಬೊಕ್ಕೆಗಳು ಬರುವಂತೆ ಥಳಿಸಿದರು. ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಸಿದ್ದಾರೆ.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments