Select Your Language

Notifications

webdunia
webdunia
webdunia
webdunia

ಸೀನಿಯರ್ ವಿದ್ಯಾರ್ಥಿಗಳ ದೌರ್ಜನ್ಯ: ವಸತಿ ನಿಲಯಕ್ಕೆ ಆಂಜನೇಯ ಭೇಟಿ

ಸೀನಿಯರ್ ವಿದ್ಯಾರ್ಥಿಗಳ ದೌರ್ಜನ್ಯ: ವಸತಿ ನಿಲಯಕ್ಕೆ ಆಂಜನೇಯ ಭೇಟಿ
ಚಿಕ್ಕಬಳ್ಳಾಪುರ , ಭಾನುವಾರ, 21 ಸೆಪ್ಟಂಬರ್ 2014 (14:45 IST)
ಅಂಬೇಡ್ಕರ್ ವಸತಿ ನಿಲಯದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿಕೆ ನೀಡಿದ್ದಾರೆ.

ವಸತಿನಿಲಯದಲ್ಲೇ ಊಟ ಮಾಡಿದ ಆಂಜನೇಯ ಬಳಿಕ ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಾ, ವಿದ್ಯಾರ್ಥಿಗಳ ರಕ್ಷಣೆಗಾಗಿ ಹೊಸ ಕಾನೂನು ಜಾರಿಗೆ ತರುವುದಾಗಿ ಹೇಳಿದರು.

ಹತ್ತಾರು ವರ್ಷಗಳಿಂದ ಕಿರಿಯ ವಿದ್ಯಾರ್ಥಿಗಳ ಮೇಲೆ ಸೀನಿಯರ್ ವಿದ್ಯಾರ್ಥಿಗಳು ದೌರ್ಜನ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಒಂದು ಬಾರಿ ಕ್ಷಮಿಸಿದ್ದೇವೆ. ಇಂತಹ ಪ್ರಕರಣ ಮತ್ತೆ ನಡೆದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಆಂಜನೇಯ ಎಚ್ಚರಿಕೆ ನೀಡಿದರು.

Share this Story:

Follow Webdunia kannada