Webdunia - Bharat's app for daily news and videos

Install App

ಬಂಧಿತ ಅಶ್ವಿನ್ ರಾವ್ ನ್ಯಾಯಾಲಯಕ್ಕೆ ಹಾಜರು: ನೀಡಿದ ಹೇಳಿಕೆ ?

Webdunia
ಮಂಗಳವಾರ, 28 ಜುಲೈ 2015 (14:53 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ವಿಶೇಷ ತನಿಖಾ ತಂಡದ ಅಧಿಕಾರಿಗಳಿಂದ ಬಂಧಿತನಾಗಿದ್ದ ಪ್ರಕರಣದ ಒಂದನೇ ಆರೋಪಿ ಅಶ್ವಿನ್ ರಾವ್‌ನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಂಧನ ಸಂಬಂಧ ಹೇಳಿಕೆ ದಾಖಲಿಸಿದ್ದಾನೆ.
 
ಒಂದು ಕೋಟಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಆರೋಪಿಸಲಾದ ಪ್ರಕರಣದ ಪ್ರಮುಖ ಆರೋಪಿ ಎಂದೇ ಹೇಳಲಾಗಿರುವ ಅಶ್ವಿನ್ ರಾವ್‌ನನ್ನು ಎಸ್ಐಟಿ ಅಧಿಕಾರಿಗಳು ನಿನ್ನೆ ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಪ್ರಸ್ತುತ ಬೆಂಗಳೂರಿಗೆ ಕರೆತರಲಾಗಿದ್ದು, ಅಧಿಕಾರಿಗಳು ನಂ. 58ರ ಅಡಿಯಲ್ಲಿ ನಗರದ ನೃಪತುಂಗ ರಸ್ತೆಯಲ್ಲಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ಅಶ್ವಿನ್ ಉತ್ತರಿಸಿದ್ದು, ಆತನ ಹೇಳಿಕೆಗಳು ಇಂತಿವೆ. 
 
ನ್ಯಾಯಧೀಶರು: ನಿಮ್ಮ ಹೆಸರೇನು ?
ಅಶ್ವಿನ್ ರಾವ್: ಅಶ್ವಿನ್ ಯರಬಾಟಿ.
 
ನ್ಯಾಯಧೀಶರು: ನಿಮ್ಮ ನಿವಾಸ ಹಾಗೂ ಬಂಧನದ ಬಗ್ಗೆ ವಿವರಿಸಿ ?
ಅಶ್ವಿನ್ ರಾವ್: ಹೈದರಾಬಾದ್‌ನ ರೈನ್‌ಬೋ ಅಪಾರ್ಟ್‌ಮೆಂಟ್‌ನಲ್ಲಿ ಕೊಠಡಿಯೊಂದನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದೆ. ಈ ವೇಳೆ ಬಾಲರಾಜು ಹಾಗೂ ಐವರು ಪೊಲೀಸ್ ಅಧಿಕಾರಿಗಳು ನಮ್ಮ ಮನೆಗೆ ಆಗಮಿಸಿದರು. ಆಗ ಸಮಯ ಬೆಳಗ್ಗೆ 8 ಗಂಟೆಯಾಗಿತ್ತು. ಮಧ್ಯಾಹ್ನ 1.30ರ ವೇಳೆಗೆ ನೋಟಿಸ್ ನೀಡಿ ಆಗಲೇ ನನ್ನನ್ನು ಬಂಧಿಸಿದರು. ಬಳಿಕ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆ ಕುಕಟಪಲ್ಲಿಗೆ ಕರೆದೊಯ್ದು  ಬಂಧನದ ಮಾಹಿತಿ ದಾಖಲಿಸಿದರು. ಆ ಬಳಿಕ ಲಾಡ್ಜ್‌ನ್ನು ಖಾಲಿ ಮಾಡಿ ಬೆಂಗಳೂರಿಗೆ ಹೊರಟೆವು. ರಾತ್ರಿ ಸರಿ ಸುಮಾರು 11 ಗಂಟೆಗೆ ನಗರದ ಎಸ್ಐಟಿ ಕಚೇರಿ ತಲುಪಿದೆವು. ನಂತರ ರಾತ್ರಿ 2.25ರ ವೇಳೆಯಲ್ಲಿ ಬಂಧನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. 
 
ನ್ಯಾಯಧೀಶರು: ಹೈದರಾಬಾದಿನಿಂದ ಕರೆ ತರುವಾಗ ಏನಾದರೂ ಸಮಸ್ಯೆಯನ್ನು ಎದುರಿಸಿದಿರಾ ?
ಅಶ್ವಿನ್ ರಾವ್: ಇಲ್ಲ, ಯಾವುದೇ ರೀತಿಯ ತೊಂದರೆಯಾಗಿಲ್ಲ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments