Select Your Language

Notifications

webdunia
webdunia
webdunia
webdunia

ಒಳ್ಳೆಯ ತನಿಖೆ ಮಾಡ್ತೀರಿ: ಸಚಿವ ಪರಮೇಶ್ವರ್‌ಗೆ ಸಭಾಪತಿ ಕಾಗೋಡು ತಿಮ್ಮಪ್ಪ ಟಾಂಗ್

ಒಳ್ಳೆಯ ತನಿಖೆ ಮಾಡ್ತೀರಿ: ಸಚಿವ ಪರಮೇಶ್ವರ್‌ಗೆ ಸಭಾಪತಿ ಕಾಗೋಡು ತಿಮ್ಮಪ್ಪ ಟಾಂಗ್
ಬೆಂಗಳೂರು , ಮಂಗಳವಾರ, 1 ಮಾರ್ಚ್ 2016 (13:32 IST)
ವಿಧಾನಸಭೆ ಅಧಿವೇಶನದಲ್ಲಿ ವಾಚ್ ವಿಷಯ ಅಡಳಿತರೂಢ ಮತ್ತು ವಿಪಕ್ಷಗಳ ಮಧ್ಯೆ ಪ್ರತಿಧ್ವನಿಸುತ್ತಿದ್ದಂತೆ ವಾಚ್ ವಿಷಯದ ಬಗೆಗಿನ ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ಗೆ ಸಭಾಪತಿ ಕಾಗೋಡು ತಿಮ್ಮಪ್ಪ ಕೇಳಿದಾಗ, ತನಿಖೆ ನಡೆದಿದೆ ಎಂದು ಸಚಿವರು ಹೇಳಿದಾಗ, ಒಳ್ಳೆಯ ತನಿಖೆ ನಡೆಯುತ್ತಿದೆ ಎಂದು ಸಭಾಪತಿ ವ್ಯಂಗ್ಯವಾಡಿದರು.
ಸುಧಾಕರ್ ಶೆಟ್ಟಿ ತಮ್ಮ ದುಬಾರಿ ವಾಚ್‌ಗಳು ಕಳ್ಳತನವಾದ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಲವು ತಿಂಗಳುಗಳ ಹಿಂದೆ ದೂರು ನೀಡಿದ್ದರು. ಆದರೆ, ಇಲ್ಲಿಯವರೆಗೆ ವಾಚ್ ಕದ್ದ ಕಳ್ಳರು ಯಾರು ಎನ್ನುವುದು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.
 
ಎಷ್ಟು ದಿನಗಳವರೆಗೆ ತನಿಖೆ ಮಾಡ್ತೀರಿ. ಪಾರದರ್ಶಕತೆಯ ಬಗ್ಗೆ ಮಾತನಾಡುತ್ತೀರಿ ಎಂದು ಸಭಾಪತಿ ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದರು.
 
ಇದೇ ವೇಳೆ ಮಧ್ಯಪ್ರವೇಶಿಸಿದ ಕೆ.ಜೆ.ಜಾರ್ಜ್, ಶೀಘ್ರದಲ್ಲಿಯೇ ತನಿಖೆ ಮುಕ್ತಾಯಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

Share this Story:

Follow Webdunia kannada