Select Your Language

Notifications

webdunia
webdunia
webdunia
webdunia

ವಿಧಾನಸಭೆ ಅಧಿವೇಶನ: ವಾಚ್ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

ವಿಧಾನಸಭೆ ಅಧಿವೇಶನ: ವಾಚ್ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಮಂಗಳವಾರ, 1 ಮಾರ್ಚ್ 2016 (13:45 IST)
ವಿದೇಶಿ ಪ್ರಜೆಯಿಂದ ಗಿಫ್ಟ್ ಪಡೆದರೆ ತಪ್ಪಾಗುತ್ತದೆ, ಆದರೆ, ಗಿರೀಶ್ ಚಂದ್ರ ವರ್ಮಾ ಭಾರತ ದೇಶದ ನಾಗರಿಕರಾಗಿದ್ದರಿಂದ ವಿದೇಶಿ ವಿನಿಮಯ ಕಾನೂನು ಉಲ್ಲಂಘನೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
 
ನನ್ನ ತೇಜೋವಧೆಗೆ ವಿಪಕ್ಷಗಳು ನಿರಂತರವಾಗಿ ಯತ್ನ ನಡೆಸುತ್ತಿವೆ. ನಾನು ಯಾವುದೇ ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.
 
ಕಳೆದ ಜೂನ್‌ ತಿಂಗಳಲ್ಲಿ ಗೆಳೆಯ ಗಿರೀಶ್ ಅವರಿಂದ ವಾಚ್ ಪಡೆದಿದ್ದೇನೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಮುಂಬರುವ ಮಾರ್ಚ್ ತಿಂಗಳಲ್ಲಿ ತೆರಿಗೆ ಕಟ್ಟುತ್ತೇನೆ. ನಂತರ ಅದನ್ನು ಸರಕಾರಕ್ಕೆ ನೀಡುತ್ತೇನೆ ಎಂದು ಸದನದಲ್ಲಿ ಘೋಷಿಸಿದರು
 
ಆದರೆ, ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಗೆ ತೃಪ್ತರಾಗದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸುಮ್ಮನೇ ಏನೋ ಒಂದು ಉತ್ತರ ನೀಡಿದರೆ ಸಾಲದು ಸಂಪೂರ್ಣ ತನಿಖೆಯಾಗಲಿ ಎಂದು ಒತ್ತಾಯಿಸಿದರು. ಇದರಿಂದ ಸಿಎಂ ಸಿದ್ದರಾಮಯ್ಯ ಮತ್ತು ಶೆಟ್ಟರ್ ಮಧ್ಯೆ ಮಾತಿನ ಚಕಮಕಿ ನಡೆಯಿತು.
 

Share this Story:

Follow Webdunia kannada