Webdunia - Bharat's app for daily news and videos

Install App

ಅಶ್ವತ್ಥ ನಾರಾಯಣ ಹಾಗೂ ನನ್ನ ನಡುವೆ ಯಾವ ವೈಮನಸ್ಸು ಇಲ್ಲ-ಆರ್. ಅಶೋಕ್

Webdunia
ಭಾನುವಾರ, 20 ಮಾರ್ಚ್ 2022 (18:55 IST)
ಸಚಿವ ಅಶ್ವತ್ಥ ನಾರಾಯಣ ಹಾಗೂ ನನ್ನ ನಡುವೆ ಯಾವ ವೈಮನಸ್ಸು ಸಹ ಇಲ್ಲ. ಅದೆಲ್ಲ ಸುಳ್ಳು ಈಗಾಗಲೇ ಅಶ್ವಥನಾರಾಯಣ ಸಹ ಅದನ್ನು ಹೇಳಿದ್ದಾರೆ ಎಂದು ಆರ್. ಅಶೋಕ್ ಹೇಳಿದ್ದಾರೆ.
 
ಯಾದಗಿರಿಯ ದೇವತ್ಕಲ್ ಗ್ರಾಮದಲ್ಲಿ ಮಾತನಾಡಿದ ಅವರು, ಸಚಿವ ಅಶ್ವತ್ಥ ನಾರಾಯಣ ಹಾಗೂ ನನ್ನ ನಡುವೆ ಯಾವ ವೈಮನಸ್ಸು ಸಹ ಇಲ್ಲ. ಅದೆಲ್ಲ ಸುಳ್ಳು ಈಗಾಗಲೇ ಅಶ್ವತ್ಥ ನಾರಾಯಣ ಸಹ ಅದನ್ನು ಹೇಳಿದ್ದಾರೆ. ಅದು ನನಗೆ ಸಂಬಂಧಪಟ್ಟ ವಿಚಾರ ಸಹ ಅಲ್ಲ. ಯಾಕಂದರೆ ಯಾವುದೇ ಟ್ರಾನ್ಸ್‌ಫರ್‌ ಮಾಡಲು ನನಗೆ ಅಧಿಕಾರ ಇಲ್ಲ, ಅದು ಮೇನಲ್ಲಿ ಮಾತ್ರ ಅವಕಾಶ. ಯಡಿಯೂರಪ್ಪ, ಅಶ್ವತ್ಥ ನಾರಾಯಣ ಒಬ್ಬರಿಗೆ ಸೂಚಿಸಿದ್ದಾರೆ. ಅದನ್ನು ಮುಖ್ಯಮಂತ್ರಿಗಳು ತಿರ್ಮಾನ ಮಾಡುತ್ತಾರೆ. ಅಶ್ವಥನಾರಾಯಣ ನಾನು ಇಬ್ಬರು ಅಣ್ಣ-ತಮ್ಮದಿರಂತೆ. ನಮ್ಮ ನಡುವೆ ಯಾವ ವ್ಯತ್ಯಾಸ ಹಿಂದೆನು ಇಲ್ಲ ಮುಂದೆನು ಇಲ್ಲ ಎಂದಿದ್ದಾರೆ.
 ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವದು ಒಳ್ಳೆಯದು. ಭಗವದ್ಗೀತೆ ಇವತ್ತಿಂದು ಅಲ್ಲ, ಅದಕ್ಕೆ 500 ವರ್ಷಗಳು ಇತಿಹಾಸವಿದೆ. ಭಾರತದಲ್ಲಿ ಇದನ್ನು ಜಾರಿ ಮಾಡದೇ ಏನ ಪಾಕಿಸ್ತಾನ, ಅರಬ್ ದೇಶಗಳಲ್ಲಿ ಜಾರಿಗೆ ತರಲು ಸಾಧ್ಯನಾ? ಆಯಾ ದೇಶದಲ್ಲಿ ಆಯಾ ಧರ್ಮಕ್ಕೆ ಸಂಬಂಧಪಟ್ಟಂತೆ ಪಠ್ಯದಲ್ಲಿ ಅಳವಡಿಸಲಾಗಿದೆ. ಮುಂದಿನ ವರ್ಷದ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಬಂದ್ರೆ ಬಹಳ ಒಳ್ಳೆಯದಾಗುತ್ತದೆ. ಇದು ಒಂದು ಸನಾತನ ಧರ್ಮ ಇಲ್ಲಿ ಬ್ರಿಟಿಷರು, ಬಾಬರ್ ಬಂದು ಹೋಗಿದ್ದಾರೆ. ಅದು ನಮ್ಮ ಸಂಸ್ಕೃತಿ ಅಲ್ಲ ಎಂದಿದ್ದಾರೆ.
 ಸರ್ಕಾರ ಶಿಕ್ಷಣಕ್ಕಾಗಿ ಬಹಳಷ್ಟು ಹಣ ಖರ್ಚು ಮಾಡುತ್ತದೆ. ಮದರಸಾಗಳಲ್ಲಿ ಸಹ ವಿಜ್ಞಾನ, ಗಣಿತ ಕಲಿಬೇಕು. ಆ ವಿದ್ಯಾರ್ಥಿ ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಿಯಬೇಕು. ಆ ಮಕ್ಕಳು ಸಹ ಅಂತರರಾಷ್ಟ್ರೀಯ ರಾಷ್ಟ್ರಮಟ್ಟದಲ್ಲಿ ಉದ್ಯೋಗ ಸಿಗಬೇಕು. ಮದರಸಾದಿಂದ ಬೆಂಗಳೂರಲ್ಲಿ ಮಾತ್ರ ಅಲ್ಲ ದೇಶದ ಯಾವ ಕಡೆ ಹೋದರು ಬೆಲೆ ಸಿಗಬೇಕು. ಹೀಗಾಗಿ ಅದರ ಚಿಂತನಯಷ್ಟೇ ಈಗ ಸರ್ಕಾರ ಮಾಡುತ್ತಿದೆ. ಇದನ್ನು ಜನರ ಮುಂದೆ ಇಟ್ಟು ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೋಳ್ಳಲಾಗುವುದು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಂ ಯುವಕನ ಹತ್ಯೆ ಪ್ರಕರಣ: ದ.ಕನ್ನಡ ಜಿಲ್ಲೆಯಲ್ಲಿ ಮೂರು ದಿನ ನಿಷೇಧಾಜ್ಞೆ

Operation Sindoor: ಐಪಿಎಲ್‌ ಫೈನಲ್‌ನಲ್ಲಿ ಗೌರವಕ್ಕೆ ಒಳಗಾಗುವ ಮೂವರು ದೇಶದ ಅಧಿಕಾರಿಗಳು ಇವರೇ

ರಾಜ್ಯದಲ್ಲಿ ಕೊತ್ವಾಲ್‌ ಶಿಷ್ಯಂದಿರು ವಿಜೃಂಭಿಸುತ್ತಿದ್ದಾರೆ: ಜೆಡಿಎಸ್‌

ಪಾಕಿಸ್ತಾನ ಪರ ಬೇಹುಗಾರಿಕೆ: ಪಾಕ್‌ರೊಂದಿಗಿನ ಜ್ಯೋತಿ ಮಲ್ಹೋತ್ರಾ ಲಿಂಗ್ ಕೇಳಿದ್ರೆ ದಂಗಾಗ್ತೀರಾ

ಕನ್ನಡ ಭಾಷೆಗೆ ಅಪಮಾನ ಮಾಡದಿರಿ, ಇದನ್ನು ಸಹಿಸಲು ಅಸಾಧ್ಯ: ಸಿಟಿ ರವಿ

ಮುಂದಿನ ಸುದ್ದಿ
Show comments