Select Your Language

Notifications

webdunia
webdunia
webdunia
webdunia

ದೆಹಲಿಯ ರಸ್ತೆಗಳ ಮೇಲೆಲ್ಲಾ ಬಿಜೆಪಿ ಕಸ ಚೆಲ್ಲುತ್ತಿದೆ: ಕೇಜ್ರಿವಾಲ್ ಆರೋಪ

ದೆಹಲಿಯ ರಸ್ತೆಗಳ ಮೇಲೆಲ್ಲಾ ಬಿಜೆಪಿ ಕಸ ಚೆಲ್ಲುತ್ತಿದೆ: ಕೇಜ್ರಿವಾಲ್ ಆರೋಪ
ಬೆಂಗಳೂರು: , ಬುಧವಾರ, 3 ಫೆಬ್ರವರಿ 2016 (15:16 IST)
ಬೆಂಗಳೂರಿನಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿ ನಡೆಸಿದ್ದು, ಎಂಸಿಡಿಯಲ್ಲಿ ಸಂಬಳ ನೀಡದಿದ್ದಾಗ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ದೆಹಲಿಯಲ್ಲಿ ಎಂಸಿಡಿ ನೌಕರರ ಬೃಹತ್ ಪ್ರತಿಭಟನೆ ವಿಚಾರವಾಗಿ ಮಾತನಾಡುತ್ತಾ ಅವರು ಹೇಳಿದರು.

 ನಗರವನ್ನು ಸ್ವಚ್ಛವಾಗಿಡಲು ಆಪ್ ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳಿದರು.  ಎಂಸಿಡಿಯಲ್ಲಿ ಹಲವು ತಿಂಗಳಿಂದ ನೌಕರರಿಗೆ ಸಂಬಳ ನೀಡಿಲ್ಲ. ಬಿಜೆಪಿ ದೆಹಲಿಯಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಅರವಿಂದ್ ಕೇಜ್ರಿವಾಲ್ ಕಿಡಿ ಕಾರಿದರು.  

ದೆಹಲಿಯ ರಸ್ತೆಗಳ ಮೇಲೆಲ್ಲಾ ಬಿಜೆಪಿ ಕಸ ಚೆಲ್ಲುತ್ತಿದೆ. ದೆಹಲಿ ಸಮಸ್ಯೆಗೆ ಆಪ್ ಕಾರಣ ಎಂಬಂತೆ ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ದೆಹಲಿಯ ಎಲ್ಲಾ ಪಾಲಿಕೆಗಳಿಗೆ ಹಣ ಬಿಡುಗಡೆ ಮಾಡಿದ್ದರೂ ಸಂಬಂಧಪಟ್ಟ ವ್ಯಕ್ತಿಗಳಿಗೆ ಅದು ತಲುಪಿಲ್ಲ ಎಂದು ಸಿಎಂ ಆರೋಪಿಸಿದರು. ಎಂಸಿಡಿ ಬಳಿ ಹಣದ ಲೆಕ್ಕ ಕೇಳಿದರೆ ತೋರಿಸುತ್ತಿದೆ. ದುರ್ಬಳಕೆಯಾದ ಬಗ್ಗೆ ಖಚಿತ ಮಾಹಿತಿಯಿದೆ. ಎಂಸಿಡಿಗೆ ಕೊಟ್ಟ ಹಣ ಎಲ್ಲಿ ಹೋಯಿತು ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. 

Share this Story:

Follow Webdunia kannada