ರಾಜ್ಯಪಾಲರ ನೇಮಕ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಮುಖಂಡ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಹಿಂದೆ ಭಾರದ್ವಾಜ್ ನೇಮಕ ವಿಚಾರದಲ್ಲೂ ಯುಪಿಎ ಸರ್ಕಾರ ರಾಜ್ಯಸರ್ಕಾರದೊಂದಿಗೆ ಚರ್ಚಿಸಿಲ್ಲ. ರಾಜ್ಯಪಾಲರ ನೇಮಕ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು. ವಜುಭಾಯಿ ಅನುಭವಿ ರಾಜಕಾರಣಿ, ಸಚಿವರಾಗಿದ್ದರು.
ಗುಜರಾತಿನಲ್ಲಿ ಹಣಕಾಸು ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸಿದ್ದರು. ಅವರೊಂದಿಗೆ ರಾಜ್ಯಸರ್ಕಾರ ಸಹಕರಿಸಿಕೊಂಡು ಹೋಗಲಿ ಎಂದು ಬಿಜೆಪಿ ನಾಯಕ ಈಶ್ವರಪ್ಪ ಹೇಳಿದ್ದಾರೆ.
ವಜುಭಾಯಿ ಅವರನ್ನು ನೇಮಕ ಮಾಡುವ ಮುಂಚೆ ಪ್ರಧಾನಿ ಮೋದಿ ತಮ್ಮ ಸಲಹೆಯನ್ನು ಕೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಸೌಜನ್ಯಕ್ಕಾದರೂ ತಮ್ಮ ಜತೆ ಮಾತನಾಡಿ ತಮ್ಮ ಸಲಹೆ ಪಡೆಯಬಹುದಾಗಿತ್ತು ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದರು.