Select Your Language

Notifications

webdunia
webdunia
webdunia
webdunia

ಸಮಿತಿ ಸಭೆಯಲ್ಲಿ ಬೇಡಿಕೆ ಅನುಷ್ಠಾನಗೊಂಡಿಲ್ಲ: ಜಯಚಂದ್ರ ವಿರುದ್ಧ ಶಾಸಕರ ಅಸಮಧಾನ

ಸಮಿತಿ ಸಭೆಯಲ್ಲಿ ಬೇಡಿಕೆ ಅನುಷ್ಠಾನಗೊಂಡಿಲ್ಲ: ಜಯಚಂದ್ರ ವಿರುದ್ಧ ಶಾಸಕರ ಅಸಮಧಾನ
ಬೆಂಗಳೂರು , ಬುಧವಾರ, 28 ಜನವರಿ 2015 (13:44 IST)
ಅಧ್ಯಕ್ಷರು ಕೇವಲ ಕಾಟಾಚಾರಕ್ಕೆ ಸಮಿತಿ ಸಭೆ ಕರೆಯುತ್ತಿದ್ದಾರೆ ಹೊರತು ಸದಸ್ಯರ ಯಾವ ಬೇಡಿಕೆಯೂ ಅನುಷ್ಠಾನಗೊಳಿಸಿಲ್ಲ ಎನ್ನುವ ಮೂಲಕ ವಿಧಾನಸಭೆ ಸಮಿತಿ ಅಧ್ಯಕ್ಷ ಟಿ.ಬಿಯಜಯಚಂದ್ರ ವಿರುದ್ಧ ಹಲವು ಶಾಸಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.  
 
ಅಸಮಧಾನಗೊಂಡ ಎಲ್ಲಾ ಶಾಸಕರೂ ಕೂಡ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಸರ್ಕಾರ ಮಧ್ಯಂತರ ತಡೆ ನೀಡಿತ್ತು. ಆದರೆ ಇಲ್ಲಿಯವರೆಗೂ ಕೂಡ ಮುಂದಿನ ಕ್ರಮ ಕೈಗೊಂಡಿಲ್ಲ. ಇನ್ನು ನೈಸ್ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರೂ ಕೂಡ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಅಧ್ಯಕ್ಷರು ರೈತರೊಂದಿಗೇ ನೇರವಾಗಿ ಚರ್ಚಿಸಬೇಕು. ಇಂತಹ ಅನೇಕ ಸಮಸ್ಯೆಗಳಿದ್ದರೂ ಕೂಡ ಅಧ್ಯಕ್ಷರು ಕೇವಲ ಕಾಟಾಚಾರಕ್ಕೆ ಮಾತ್ರ ಸಮಿತಿ ಸಭೆ ನಡೆಸಿದ್ದಾರೆ ಹೊರತು ಸದಸ್ಯರ ಯಾವ ಬೇಡಿಕೆಯೂ ಅನುಷ್ಠಾನಗೊಳಿಸಿಲ್ಲ ಎಂದು ಶಾಸಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. 
 
ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಕೊರಟಗೆರೆ ಜೆಡಿಎಸ್ ಶಾಸಕ ಸುಧಾಕರ್ ಲಾಲ್ ಸೇರಿದಂತೆ ಇತರೆ ಶಾಸಕರು ಸಮಿತಿ ಅಧ್ಯಕ್ಷ ಜಯಚಂದ್ರ ಅವರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada