Select Your Language

Notifications

webdunia
webdunia
webdunia
webdunia

ಮತ್ತೊಬ್ಬ ಅನ್ನದಾತನ ಆತ್ಮಹತ್ಯೆ

ಮತ್ತೊಬ್ಬ ಅನ್ನದಾತನ ಆತ್ಮಹತ್ಯೆ
ಧಾರವಾಡ , ಸೋಮವಾರ, 8 ಫೆಬ್ರವರಿ 2016 (08:55 IST)
ರಾಜ್ಯದಲ್ಲಿ ರೈತರ ಆತ್ಮಹತ್ಯಾ ಸರಣಿ ಮುಂದುವರೆದಿದ್ದು ಸಾಲಗಾರರ ಕಾಟ ತಾಳಲಾರದೆ ಧಾರವಾಡದಲ್ಲಿ ಅನ್ನದಾತನೊಬ್ಬ ಸಾವಿಗೆ ಶರಣಾಗಿದ್ದಾನೆ.

ತಾಲೂಕಿನ ಮಾರಡಗಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು ಕ್ರಿಮಿನಾಶಕ ಸೇವಿಸಿ ಚನ್ನಬಸಪ್ಪ ಮೆಟ್ಟಿನ (65) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 
1.25 ಎಕರೆ ಕೃಷಿ ಜಮೀನು ಹೊಂದಿದ್ದ ಅವರು ಬಳಿ ಕೃಷಿ ಚಟುವಟಿಕೆಗಾಗಿ ಕೈಗಡಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
 
ಈ ಸಾಲವನ್ನು ತೀರಿಸಲಾಗದೆ ಪರದಾಡುತ್ತಿದ್ದ ಅವರು ಸಾಲಗಾರರು ಮನೆ ಬಳಿ ಬಂದು ಕಾಟ ನೀಡುತ್ತಿದ್ದಕ್ಕೆ ಬೇಸತ್ತು ತಮ್ಮ ಹೊಲದಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 
 ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada