ಜಯಲಲಿತಾ ಅವರು ಜಾಮೀನು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ಮುಂದೂಡಿದ ಕ್ರಮದ ವಿರುದ್ಧ ಪರಪ್ಪನ ಅಗ್ರಹಾರ ಜೈಲಿನ ಮುಂದೆ ಅಣ್ಣಾ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಚೆನ್ನೈನಲ್ಲಿ ಪೋಯಸ್ ಗಾರ್ಡನ್ನಲ್ಲಿರುವ ಜಯಾ ನಿವಾಸ ಮತ್ತು ಅಣ್ಣಾ ಡಿಎಂಕೆ ಕಚೇರಿ ಮುಂದೆಯೂ ಭಾರೀ ಪ್ರತಿಭಟನೆ ನಡೆದಿದೆ. ಸುಮಾರು 100ಕ್ಕೂ ಹೆಚ್ಚು ಬೆಂಬಲಿಗರು ಇಂದು ಕೋರ್ಟ್ ಎದುರು ಜಮಾಯಿಸಿದ್ದರು. ವಿಚಾರಣೆಯನ್ನು ಮುಂದೂಡಿದ ವಿಚಾರ ತಿಳಿದುಬರುತ್ತಿದ್ದಂತೆ ಪ್ರತಿಭಟನೆ ಆರಂಭಿಸಿದರು.
ಜಯಾ ಬೆಂಬಲಿಗ ಕೆಲವು ಮಹಿಳೆಯರು ಗೋಳೋ ಎಂದು ಅತ್ತು, ಅತ್ತು ನಿತ್ರಾಣರಾಗಿದ್ದರು. ನಮ್ಮ ಪ್ರಯತ್ನ ವಿಫಲವಾಗಿದೆ. ಇದು ದುರದೃಷ್ಟಕರ. ಆದರೆ ಪೀಠದ ಆದೇಶಕ್ಕೆ ತಲೆಬಾಗಲೇಬೇಕು ಎಂದು ಇಳವರಸಿ ಪರ ವಕೀಲ ಅಸ್ಮತ್ ಪಾಷಾ ತಿಳಿಸಿದ್ದಾರೆ.